ಕಾಸರಗೋಡು: ಕಾಸರಗೋಡಿನ ಹಿರಿಯ ಅರಿವಳಿಕೆ ತಜ್ಞ ಡಾ.ವೆಂಕಟಗಿರಿ ಕೆ.ಎಂ. ಅವರು ಅರಿವಳಿಕೆ ತಜ್ಞರ ಸಂಘಟನೆಯಾದ ಐ.ಎಸ್.ಎ.ಯ 2020-21 ನೇ ವರ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನ.29 ರ ವರೆಗೆ ಬೆಂಗಳೂರಿನಲ್ಲಿ ನಡೆಯುವ 67 ನೇ ವಾರ್ಷಿಕ ಸಮ್ಮೇಳನದಲ್ಲಿ ನಿಯೋಜಿತ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ.