HEALTH TIPS

ಸಚಿವರಿಂದ ಪಾಂಡಿ ಸರ್ಕಾರಿ ಶಾಲಾ ನೂತನ ಕಟ್ಟಡ ಶಿಲಾನ್ಯಾಸ

 
          ಮುಳ್ಳೇರಿಯ: ದೇಲಂಪಾಡಿ ಪಾಂಡಿಯ ಸರ್ಕಾರಿ ಹೈಯರ್ ಸೆಕೆಮಡರಿ ಶಾಲೆಗೆ ರಾಜ್ಯ ಸರ್ಕಾರದ ಅಭಿವೃದ್ದಿ ಯೋಜನೆಯಡಿಯ ನಿಧಿಯಿಂದ ಮಂಜೂರಾದ ನೂತನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಸೋಮವಾರ ಶಾಲಾ ಪರಿಸರದಲ್ಲಿ ನಡೆಯಿತು.
         ಉದುಮ ಶಾಸಕ ಕೆ.ಕುಂಞರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಶಿಲಾನ್ಯಾಸ ನಿರ್ವಹಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಎನ್, ಸಮಗ್ರ ಶಿಕ್ಷಾ ಕೇರಳದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ನಾರಾಯಣ ದೇಲಂಪಾಡಿ ಉಪಸ್ಥಿತರಿದ್ದು ಮಾತನಾಡಿದರು. ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಓಮನಾ ರಾಮಚಂದ್ರನ್, ಉಪಾಧ್ಯಕ್ಷ ಸಿ.ಕೆ.ಕುಮಾರನ್, ಜಿ.ಪಂ.ಸದಸ್ಯ ನಾರಾಯಣ, ದೇಲಂಪಾಡಿ ಗ್ರಾ.ಪಂ.ಉಪಾಧ್ಯಕ್ಷೆ ನಿರ್ಮಲ, ಸ್ಥಾಯೀ ಸಮಿತಿ ಅಧ್ಯಕ್ಷರಾದ ರತನ್ ಕುಮಾರ್, ಪಿ.ಸಿಂಧು, ಗಂಗಾಧರನ್, ಬ್ಲಾ.ಪಂ.ಸದಸ್ಯೆ ವತ್ಸಲ, ಗ್ರಾ.ಪಂ.ಸದಸ್ಯೆ ಉಷಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಂಘಟನೆಯ ಪ್ರಮುಖರು, ಹೈಯರ್ ಸೆಕೆಂಡರಿ ಶಾಲಾ ಹಿರಿಯ ಸಹಾಯಕಿ ಸೋಭನಾ ಮೇರಿ, ಮುಖ್ಯ ಶಿಕ್ಷಕಿ ರೇಖಾಸ್ಮಿತಾ ಉಪಸ್ಥಿತರಿದ್ದು ಶುಭಹಾರೈಸಿದರು. ದೇಲಂಪಾಡಿ ಗ್ರಾ.ಪಂ.ಅಧ್ಯಕ್ಷ ಎ.ಮುಸ್ತಫ ಸ್ವಾಗತಿಸಿ, ಮುಖ್ಯ ಶಿಕ್ಷಕಿ ರೇಖಾಸ್ಮಿತಾ ವಂದಿಸಿದರು. ವಿಜಯನ್ ಶಂಕರಪಾಂಡಿ ಹಾಗೂ ಶೈಲಜಾ ಎನ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries