HEALTH TIPS

ಶಿವಮಂಗಲ ಕ್ಷೇತ್ರ ಜೀರ್ಣೋದ್ಧಾರ-ಮಹಿಳಾ ಸಮಿತಿ ರಚನೆ

   
     ಕಾಸರಗೋಡು: ಕೂಡ್ಲು ಸಮೀಪದ ಅತಿ ಪುರಾತನಕ್ಷೇತ್ರವಾದ ಶಿವಮಂಗಲ ಶ್ರೀ ಸದಾಶಿವ ಜೀರ್ಣೋದ್ಧಾರಕಾರ್ಯಗಳಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಶಿವಮಂಗಲ ಶ್ರೀ ಸದಾಶಿವಮಹಿಳಾಸಮಿತಿಯನ್ನು ರಚಿಸಲಾಯಿತು. ಈ ಬಗ್ಗೆ ನಡೆದ ಸಮಿತಿ ರಚನಾ ಸಭೆಯಲ್ಲಿ ನಿವೃತ್ತ ಮುಖ್ಯಶಿಕ್ಷಕಿ ಮೋಹಿನಿ ರಾವ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ಹಾಗೂ ಮಾತೃಸೇವಿಕಾ ಸಂಸ್ಥೆಯ ಸವಿತಾ ಟೀಚರ್‍ಸಭೆಯನ್ನು ಉದ್ಘಾಟಿಸಿದರು. ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯಿತಿ ಸದಸ್ಯೆ ಲೀಲಾ, ಮಧೂರು ಗ್ರಾವಪಂಚಾಯಿತಿ ಸದಸ್ಯೆ ಪುಷ್ಪಾ, ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯೆ ಯಶೋಧ, ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ಅಧ್ಯಕ್ಷೆ ಉಮಾ,ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ರೇಣುಕಾ, ಶಿವಪಾರ್ವತಿಮಹಿಳಾ ಸಂಘದ ಅಧ್ಯಕ್ಷೆ ಚಂದ್ರಕಲಾ, ಕೂಡ್ಲು ಕ್ಷೇತ್ರಗಳ ಅನುವಂಶಿಕ ಮೊಕ್ತೇಸರ ಕೆ ಜಿ ಶಾನ್‍ಭಾಗ್, ಶಿವಮಂಗಲ ಕ್ಷೇತ್ರದ ಅರ್ಚಕ ನಾಗೇಂದ್ರಭಟ್, ಜೀರ್ಣೋದ್ಧಾರ ಸಮಿತಿಯಕಾರ್ಯದರ್ಶಿ ವೇಣುಗೋಪಾಲಅಡಿಗ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ,ರವಿರಾಜ ಅಡಿಗ, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ರಕ್ಷಾದಿಕಾರಿಯಾಗಿಮೋಹಿನಿ ರಾವ್, ಗೌರವಾಧ್ಯಕ್ಷರಾಗಿ ಲೀಲಾ ಗುವೆತಡ್ಕ, ಅಧ್ಯಕ್ಷರಾಗಿ ಸರಳಾ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೀಳಾ ಕೂಡ್ಲು,ಕೋಶಾಧಿಕಾರಿಯಾಗಿ ಶಿಲ್ಪಾ, ಆಯ್ಕೆ ಗೊಂಡರು. ಶಿವಮಂಗಲ ಶ್ರೀ ಸದಾಶಿವ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನಕಾರ್ಯದರ್ಶಿ ಕಿರಣ್ ಪ್ರಸಾದ್ ಕೂಡ್ಲು ಪ್ರಾಸ್ತಾವಿಕವಾಗಿಮಾತನಾಡಿದರು. ಹೇಮಲತ ಸ್ವಾಗತಿಸಿ, ಶಿಲ್ಪಾವಂದಿಸಿದರು. ಸುಧಾಟೀಚರ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries