ಮಧೂರು: ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ನೇತೃತ್ವದಲ್ಲಿ ಸ್ಕೌಟು ಗೈಡ್ ಹಿಮಾಲಯ ವೃಕ್ಷಮಣಿ ಧಾರಕರ ಪುನ:ಸಂಘಟನಾ ಶಿಬಿರ ಮಧೂರು ಜಿ.ಜೆ.ಬಿ.ಎಸ್. ಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಶಿಬಿರದ ಉದ್ಘಾಟನೆಯನ್ನು ಕಾಸರಗೋಡು ಎ.ಎಸ್.ಪಿ. ಪ್ರಶೋಬ್ ಅವರು ನೆರವೇರಿಸಿದರು. ಕಾಸರಗೋಡು ಜಿಲ್ಲಾ ಸಂಸ್ಥೆಯ ಅಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಗೈಡ್ ವಿಭಾಗದ ರಾಜ್ಯ ತರಬೇತಿ ಆಯುಕ್ತೆ ವಸಂತ, ಗೈಡ್ ವಿಭಾಗದ ರಾಜ್ಯ ಸಂಘಟನಾ ಆಯುಕ್ತೆ ಶೀಲಾ ಜೋಸೆಫ್, ಕಾಸರಗೋಡು ಜಿಲ್ಲಾ ಗೈಡ್ ಆಯುಕ್ತೆ ಭಾರ್ಗವಿ ಕುಟ್ಟಿ, ರಾಜ್ಯ ಸಹ ಸಂಘಟನಾ ಆಯುಕ್ತ ಪಿ.ಪ್ರಶಾಂತ್ ಶುಭ ಹಾರೈಸಿದರು.
ಸಮಾರಂಭದಲ್ಲಿ ಕಾಸರಗೋಡಿನ ಹಿರಿಯ ಹಿಮಾಲಯ ವೃಕ್ಷಮಣಿ ಧಾರಕರಾದ ಸವಿತಾ ಟೀಚರ್, ಜೋನ್ ಮಾಸ್ತರ್, ವಿಷ್ಣು ಮಯ್ಯ ಮಾಸ್ತರ್, ಮಾಧವ ಮಾಸ್ತರ್, ಮೋಳಿ ಮೈಕಲ್ ಟೀಚರ್, ನಯನ ತಾರ ಟೀಚರ್, ಕೃಷ್ಣ ಭಟ್ ಮಾಸ್ತರ್ ಕಾಟುಕುಕ್ಕೆ, ರಾಧಾಕೃಷ್ಣ ಬಲ್ಲಾಳ್ ಮಾಸ್ತರ್, ವಿಶ್ವನಾಥ ಆಳ್ವ ಮಾಸ್ತರ್, ರಮಣಿ ಟೀಚರ್, ಆನಂದ ಮೂಲ್ಯ ಮಾಸ್ತರ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೂಡ್ಲು ಸ್ವಾಗತಿಸಿ, ಕಾಸರಗೋಡು ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಸಾಬು ಥೋಮಸ್ ವಂದಿಸಿದರು. ರೋವರ್ ಲೀಡರ್ ಅಜಿತ್ ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ಶಿಬಿರ ಚಟುವಟಿಕೆ ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಸಾಬು ಥೋಮಸ್ ಮತ್ತು ಜಿಲ್ಲಾ ಗೈಡ್ ತರಬೇತಿ ಆಯುಕ್ತೆ ಆಶಾಲತ ಅವರ ನಾಯಕತ್ವದಲ್ಲಿ ನಡೆಯಿತು. ಕಾಂಞಂಗಾಡು ಜಿಲ್ಲಾ ಸ್ಕೌಟ್ ಆಯುಕ್ತ ಜಿ.ಕೆ.ಗಿರೀಶ್ ಹಿಮಾಲಯ ವೃಕ್ಷಮಣಿ ಧಾರಕರ ಪಾತ್ರದ ಬಗ್ಗೆಯೂ, ತಳಿಪರಂಬದ ಹಿರಿಯ ಲೀಡರ್ ಟ್ರೈನರ್ ಹರೀಂದ್ರನ್ ಜಿಲ್ಲೆಯಲ್ಲಿ ಹಿಮಾಲಯ ವೃಕ್ಷಮಣಿ ಧಾರಕರ ಜವಾಬ್ದಾರಿಯ ಬಗ್ಗೆ ತರಗತಿ ನಡೆಸಿ ಕೊಟ್ಟರು. ಸ್ಕೌಟ್ ಗೈಡ್ ರಾಜ್ಯ ಕಾರ್ಯದರ್ಶಿ ಪ್ರದೀಪ್, ಸ್ಕೌಟ್ ಗೈಡ್ ಜಿಲ್ಲಾ ಪ್ರಧಾನ ಆಯುಕ್ತ ಮತ್ತು ಕಾಸರಗೋಡು ಜಿಲ್ಲಾ ವಿದ್ಯಾ„ಕಾರಿ ನಂದಿಕೇಶನ್, ಸ್ಟುಡೆಂಟ್ ಪೆÇಲೀಸ್ ಕೆಡೆಟ್ ಮುಖ್ಯಸ್ಥ ಕಾಸರಗೋಡು ಡಿ.ವೈ.ಎಸ್.ಪಿ. ಹಸೈನಾರ್ ಮುಂತಾದವರು ಶಿಬಿರವನ್ನು ಸಂದರ್ಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಬಿರದ ಎರಡನೇ ದಿನದ ಕಾರ್ಯಕ್ರಮ ಕುಂಬಳೆಯ ಅನಂತಪುರದಲ್ಲಿ ಜರಗಿತು. ರಾಜ್ಯ ಸಹ ಸಂಘಟನಾ ಆಯುಕ್ತ ಪಿ ಪ್ರಶಾಂತ್, ಜಿಲ್ಲಾ ಸಹ ಆಯುಕ್ತ ಮಂಜೇಶ್ವರ ವಿನೋದ್ ಚೇವಾರು, ಜಿಲ್ಲಾ ಕೋಶಾ„ಕಾರಿ ವಿನೋದ್ ಕುಮಾರ್ ಬಿ. ಶಿಬಿರದ ನೇತೃತ್ವ ವಹಿಸಿದರು.