ಬದಿಯಡ್ಕ: ದಸ್ತಾವೇಜು ಬರಹಗಾರರ ಬದಿಯಡ್ಕ ಘಟಕದ ಎಲ್ಲಾ ಕಚೇರಿಗಳೂ ಮಾರ್ಚ್ 21ರಿಂದ ಮಾ.31ರ ತನಕ ಮುಚ್ಚುಗಡೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಕರಿಂಬಿಲ ಲಕ್ಷ್ಮಣ ಪ್ರಭು ಸಮಿತಿಯ ಸಭೆಯಲ್ಲಿ ನಡೆದ ತೀರ್ಮಾನವನ್ನು ತಿಳಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬೆಂಬಲವಾಗಿ ಈ ಕ್ರಮಕೈಗೊಳ್ಳಲಾಗಿದೆ. ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.