HEALTH TIPS

ರಾಮಾಯಣ ಮಾಸಾಚರಣೆ- ಪೂರ್ವಭಾವಿ ಸಭೆ ಮಾ.8ರಂದು ಬದಿಯಡ್ಕ ಸಂಸ್ಕøತಿ ಭವನದಲ್ಲಿ

     
       ಬದಿಯಡ್ಕ: ಕಳೆದ ಏಳು ವರ್ಷಗಳಿಂದ ರಾಮಾಯಣ ಮಾಸಾಚರಣೆಯನ್ನು ಮನ ಮನೆಗಳಲ್ಲಿ ದೈವೀಗುಣಗಳನ್ನು ಉಳಿಸಿ ಬೆಳೆಸು ಉದ್ದೇಶದಿಂದ ಪುಂಡರೀಕಾಕ್ಷ ಬೆಳ್ಳೂರು ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಕರ್ಕಾಟಕ ಸಂಕ್ರಾಂತಿಯಿಂದ ಸಿಂಹ ಸಂಕ್ರಮಣದವರೆಗೆ 33 ದಿನಗಳ ಕಾಲ, ಪುತ್ರಕಾಮೇಷ್ಠಿಯಿಂದ ರಾಮ ನಿರ್ಯಾಣದವರೆಗೆ ಹರಿಕಥೆಯ ಮೂಲಕ ರಾಮಾದರ್ಶ ಜೀವನ-ಗ್ರಾಮಾದರ್ಶ ಮನೆಯ ಲಕ್ಷ್ಯವಿರಿಸಿ ರಾಮನಾಮ ಜಪವನ್ನು ಮಾಡಿಸಿ ಕೊನೆಯಲ್ಲಿ, ಆದಿತ್ಯ ಹೃದಯ ಹವನ, ಸೀತಾಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, 108 ಕಾಯಿ ಗಣಪತಿ ಹೋಮ ಹಾಗೂ ಇನ್ನಿತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
     ಈ ವರ್ಷ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶ್ರೀರಾಮ ಪಟ್ಟಾಭಿಷೇಕ ಹಾಗೂ ಸುತ್ತಮುತ್ತಲಿನ ಭಜನಾ ಮಂದಿರ, ಮನೆಗಳಲ್ಲಿ ಹರಿಕಥಾ ಸತ್ಸಂಗ, ರಾಮನಾಮ ಜಪಯಜ್ಞವನ್ನು ಮಾಡುವುದಾಗಿ ತೀರ್ಮಾನಿಸಲಾಗಿದ್ದು, ಈ ಕಾರ್ಯದ ಯಶಸ್ಸಿಗಾಗಿ ಮಾ.8ರಂದು ಭಾನುವಾರ ಸಂಜೆ 3.30ಕ್ಕೆ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಹಿತೈಷಿಗಳು, ಭಕ್ತಾದಿಗಳು ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಪುಂಡರೀಕಾಕ್ಷ ಬೆಳ್ಳೂರು ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries