ತಿರುವನಂತಪುರ: ಕೊರೋನಾ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಟೆಲಿಮೆಡಿಸಿನ್ ಸೌಲಭ್ಯ ಸಹಿತ ಸಜ್ಜುಗೊಳಿಸುವ ಬೃಹತ್ ಮಾಹಿತಿ ಸಂಗ್ರಹಕ್ಕೆ ರಾಜ್ಯ ಸರಕಾರ ಸಿದ್ಧತೆ ನಡೆಸುತ್ತಿದೆ.
ರೋಗಬಾಧಿತರ, ನಿಗಾದಲ್ಲಿರುವವರು, ಶುಶ್ರೂಷೆ ನಡೆಸುತ್ತಿರುವವರು, ಎಲ್ಲ ವಿಭಾಗದಲ್ಲಿರುವ ಆರೋಗ್ಯ ಕಾರ್ಯಕರ್ತರು, ಇತ್ತೀಚೆಗೆ ವಿದೇಶಗಳಿಂದ ಊರಿಗೆ ಆಗಮಿಸಿದವರು, ಇತರ ರಾಜ್ಯಗಳಲ್ಲಿ ಸಂಚಾರ ನಡೆಸಿದವರು, ರೋಗಸಾಧ್ಯತೆಯಿರುವವರು ಹೀಗೆ ಮಂದಿಗಳ ಬೃಹತ್ ಡಾಟಾ ತುರ್ತಾಗಿ ಸಂಗ್ರಹಿಸಲಾಗುತ್ತಿದೆ. ಇದಕ್ಕಗಿ ಸರಕಾರದ ಅಧಿಕೃತ ವೆಬ್ ಸೈಟ್ ನಲ್ಲಿ (kerala,gov.in) ನೋಂದಣಿ ಗಿರುವ ಲಿಂಕ್ ಲಭ್ಯವಿದೆ. https://citizencenter.kerala.gov.in ಎಂಬುದು ಲಿಂಕ್. ಕೇರಳದಲ್ಲಿ ಕೊರೋನಾ ಶುಶ್ರೂಷೆ ಅಗತ್ಯವಿರುವ ಎಲ್ಲರೂ ನೋಂದಣಿ ಪೂರ್ತಿಗೊಳಿಸಬೇಕು. ಸ್ಟಿರಾಯ್ಡ್ ಔಷಧ ಸೇವಿಸುತ್ತಿರುವವರು ಸಹಿತ ಪ್ರತಿರೋಧ ಶಕ್ತಿ ಕಡಿಮೆ ಇರುವವರು ಮತ್ತು ಕೊರೋನಾ ಬಾಧಿತರ ಸಂಪರ್ಕದಲ್ಲಿ ಇದ್ದವರನ್ನು ಪತ್ತೆಮಾಡಿ ತುರ್ತು ಹಂತಗಳಲ್ಲಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಟೆಲಿಫೆÇೀನ್ ಮೂಲಕ ವೈದ್ಯರನ್ನು ಸಂಪರ್ಕಿಸಲು ಈ ನೋಂದಣಿ ಸಹಾಯಕವಾಗಲಿದೆ. ಸರಕಾರಿ, ಖಾಸಗಿ ವೈದ್ಯರು ಐ.ಎಂ.ಎ.ಯ ಸಹಕಾರದೊಂದಿಗೆ ಸೋಮವಾರದಿಂದ ಟೆಲಿಫೆÇೀನ್ ಮೂಲಕ ಲಭ್ಯವಾಗಲಿದ್ದಾರೆ. ಇದಕ್ಕಿರುವ ಸಿದ್ಧತೆ ಪೂರ್ಣಗೊಂಡಿದೆ.
ಮಾನಸಿಕ ಒತ್ತಡ ಪರಿಹಾರಕ್ಕೆ ಆಯುರ್ವೇದ ಸಹಾಯವಾಣಿಗೆ ಕರೆಮಾಡಿ:
ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮನೆಗಳಲ್ಲಿ ನಿಗಾದಲ್ಲಿರುವವರು ಮತ್ತು ಅವರ ಮನೆಮಂದಿಯ ಮಾನಸಿಕ ಒತ್ತಡ ಪರಿಹಾರಕ್ಕೆ ಆಯುರ್ವೇದ ಸಹಾಯವಾಣಿಗೆ ಕರೆಮಾಡಬಹುದು. ಭಾರತೀಯ ಚಿಕಿತ್ಸಾ ಇಲಾಖೆಯ ಜಿಲ್ಲಾ ಸಹಾಯವಾಣಿ : 9446537579, 9495546171, 9744007511.