HEALTH TIPS

ಲಾಕ್ ಡೌನ್-ಇಂದಿನಿಂದ ಹಂತ ಹಂತವಾಗಿ ವಿನಾಯಿತಿ


         ತಿರುವನಂತಪುರ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ವಿನಾಯಿತಿ ಹಸಿರು ಮತ್ತು ಕಿತ್ತಳೆ-ಬಿ ವಲಯದಲ್ಲಿ ಏಪ್ರಿಲ್ 20ರಿಂದ ಜಾರಿಗೆ ಬರಲಿರುವುದಾಗಿ ಕೇರಳ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ ಬೆಹ್ರಾ ತಿಳಿಸಿದ್ದಾರೆ.
          ಕೋಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಯನ್ನು ಹಸಿರು ವಲಯ,  ಆಲಪ್ಪುಳ, ತಿರುವನಂತಪುರ, ಪಾಲಕ್ಕಾಡ್, ವಯನಾಡ್ ಮತ್ತು ತೃಶ್ಯೂರ್ ಜಿಲ್ಲೆಗಳನ್ನು ಕಿತ್ತಳೆ-ಬಿ ವಲಯದಲ್ಲಿ ಗುರುತಿಸಲಾಗಿದೆ. ಈ ಎರಡೂ ವಲಯಗಳಲ್ಲಿರುವವರು ಜಿಲ್ಲೆಯನ್ನು ದಾಟಿ ಸಂಚರಿಸಲು ಅನುಮತಿ ನಿರಾಕರಿಸಲಾಗಿದೆ. ಈ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯ ಮಾರ್ಗನಿರ್ದೇಶದನ್ವಯ ಮಾತ್ರ ಸಂಚಾರಕ್ಕೆ ಅನುಮತಿ ಕಲ್ಪಿಸಲಾಗಿದೆ. ಮದ್ಯ ಮಾರಾಟ, ಸಾರ್ವಜನಿಕ ಸಭೆ, ಶಿಕ್ಷಣ ಇಲಾಖೆ, ಚಿತ್ರಮಂದಿರ, ಶಾಪಿಂಗ್ ಕಾಂಪ್ಲೆಕ್ಸ್ ಕಾರ್ಯಾಚರಿಸದು. ಜನರು ಗುಂಪುಗೂಡುವುದಕ್ಕೂ ನಿಯಂತ್ರಣ ಹೇರಲಾಗಿದೆ. ಕೇರಳದಲ್ಲಿ ಕೋವಿಡ್-19 ವೈರಸ್ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಲಾಕ್‍ಡೌನ್ ಕಡಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries