ಮುಳ್ಳೇರಿಯ: ಮುಖ್ಯಮಂತ್ರಿ ಅವರ ದುರಂತ ನಿವಾರಣೆ ನಿ„ಗೆ ಅನೇಕ ಮಂದಿ ದೇಣಿಗೆಯಾಗಿ ನೀಡಿದ ಮೊಬಲಗನ್ನು ಉದುಮ ಶಾಸಕ ಕೆ.ಕುಂಞÂರಾಮನ್ ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದರು. 1,79,090 ರೂ. ಈ ಮೂಲಕ ಸಲ್ಲಿಸಲಾಗಿದೆ.
ಮುಳಿಯಾರಿನ ಫಾತ್ತಿಮಾ, ಝೈನಬತ್ ಸಲಾಫಿ ಅವರು ನೀಡಿರುವ 5 ಸಾವಿರ ರೂ., ಫಾತಿಮಾ ಬಿ.ಎಚ್. ಅವರು ನೀಡಿರುವ 650 ರೂ., ಮುಂಡಕೈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಧಾದೇವಿ ಅವರ ನೀಡಿರುವ 83940 ರೂ., ಮುಳಿಯಾರಿನ ಸಿ.ನಾರಾಯಣಿ ಅವರು ನೀಡಿರುವ 25 ಸಾವಿರ ರೂ., ಪೆರಿಯ ಬಝಾರ್ನ ಅಜೀಷ್ ಟಿ.ಪಿ. ನೀಡಿರುವ 30 ಸಾವಿರ ರೂ., ಆಲಕ್ಕೋಡ್ ಅಯ್ಯಪ್ಪ ಭಜನಾ ಮಂದಿರ ನೀಡಿರುವ 2 ಸಾವಿರ ರೂ., ಉಕ್ರಂಪಾಡಿ ಸಿ.ಪಿ.ಎಂ. ಬ್ರಾಂಚ್ ವತಿಯಿಂದ ನೀಡಿರುವ 5 ಸಾವಿರ ರೂ., ಉದುಮದ ನಿಜಾ ಸುಕುಮಾರನ್ ಅವರು ನೀಡಿರುವ 500 ರೂ., ಸೂರ್ಯದೇವ್ ನಾರಾಯಣನ್ ಅವರು ನೀಡಿರುವ 2 ಸಾವಿರ ರೂ., ಪೆÇಯಿನಾಚಿಯ ನಿವೃತ್ತ ಶಿಕ್ಷಕಿ ಸರಸ್ವತಿ ಕುಟ್ಟಿ ಅವರು ನೀಡಿರುವ 25 ಸಾವಿರ ರೂ., ಆಲಕ್ಕೋಡ್ ನಿವಾಸಿ ನಿಖಿತಾ ಮೋಹನನ್ ಅವರು ನೀಡಿರುವ 2 ಗ್ರಾಂ ತೂಕದ ಬಂಗಾರದ ಪದಕ ಇತ್ಯಾದಿಯನ್ನು ಶಾಸಕರು ಜಿಲ್ಲಾಧಿಕಾರಿ ಅವರಿಗೆ ಹಸ್ತಾಂತರಿಸಿದರು.


