ಪೆರ್ಲ: ಇಲ್ಲಿನ ಕುದ್ವ ನಿವಾಸಿ, ದಿ. ನೀಲಪ್ಪಾಡಿ ತಿಮ್ಮಣ್ಣ ಆಳ್ವ-ದಿ. ಕುದ್ವ ದೆಯ್ಯಕ್ಕು ದಂಪತಿ ಪುತ್ರ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಿಬ್ಬಂದಿ ಶಿವಪ್ಪ ಆಳ್ವ(54)ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಬೆಳಗ್ಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ದೀರ್ಘ ಕಾಲದಿಂದ ಬ್ಯಾಂಕಲ್ಲಿ ಉದ್ಯೋಗಿಯಾಗಿದ್ದ ಇವರು, ಪ್ರಸಕ್ತ ಬ್ಯಾಂಕಿನ ಶೇಣಿ ಶಾಖೆಯಲ್ಲಿ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಇಡಿಯಡ್ಕದ ಯುವಕ ಸಂಘ ಹಾಗೂ ಧಾರ್ಮಿಕ, ಸಾಂಸ್ಕøತಿಕ ರಂಗಗಳಲ್ಲಿ ಸಕ್ರಿಯರಾಗಿದ್ದರು. ಅವರು ಪತ್ನಿಯನ್ನು ಅಗಲಿದ್ದಾರೆ.


