HEALTH TIPS

ನಿಲ್ಲದ ಕೊರೊನಾಸುರನ ಆರ್ಭಟ-ರಾಜ್ಯದಲ್ಲಿ 138 ಖಚಿತ-ಜಿಲ್ಲೆಯಲ್ಲಿ 9 ದೃಢ

 
            ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 7 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
          ಸೋಂಕು ಖಚಿತಗೊಂಡವರಲ್ಲಿ 8 ಮಂದಿ ವಿದೇಶಗಳಿಂದ ಆಗಮಿಸಿದವರು, ಒಬ್ಬಾತ ಮಹಾರಾಷ್ಟ್ರದಿಂದ ಬಂದವರು. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 6 ಮಂದಿಗೆ, ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಸೆಂಟರ್‍ನಲ್ಲಿ ದಾಖಲಾಗಿದ್ದ ಒಬ್ಬರಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
           ಕುವೈತ್ ನಿಂದ ಬಂದಿದ್ದ ತ್ರಿಕರಿಪುರ ಗ್ರಾಮ ಪಂಚಾಯತ್ ನಿವಾಸಿ 43 ವರ್ಷದ ವ್ಯಕ್ತಿ, ವಲಿಯಪರಂಬ ಪಂಚಾಯತ್ ನಿವಾಸಿ 23, 48 ವರ್ಷದ ನಿವಾಸಿ, ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ ನಿವಾಸಿ 43 ವರ್ಷದ ವ್ಯಕ್ತಿ, ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 28 ವರ್ಷದ ವ್ಯಕ್ತಿ, ಖತಾರ್‍ನಿಂದ ಆಗಮಿಸಿದ್ದ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ನಿವಾಸಿ 44 ವರ್ಷದ ವ್ಯಕ್ತಿ, ಒಮಾನ್‍ನಿಂದ ಬಂದಿದ್ದ ವಲಿಯಪರಂಬ ಪಂಚಾಯತ್‍ನ 60 ವರ್ಷದ ನಿವಾಸಿ, ದುಬಾಯಿಯಿಂದ ಆಗಮಿಸಿದ್ದ ಮಡಿಕೈ ಪಂಚಾಯತ್ ನಿವಾಸಿ 30 ವರ್ಷದ ವ್ಯಕ್ತಿಗೆ ಮತ್ತು ಮಹಾರಾಷ್ಟ್ರ ದಿಂದ ಬಂದಿದ್ದ ತ್ರಿಕರಿಪುರ ಗ್ರಾಮ ಪಂಚಾಯತ್ ನಿವಾಸಿ 60 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ.
        ಕಾಸರಗೋಡು ಉಕ್ಕಿನಡ್ಕ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಬಂದಿದ್ದ ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 49 ವರ್ಷದ ವ್ಯಕ್ತಿ, ಮಂಗಲ್ಪಾಡಿ ಗ್ರಾಮ ಪಂಚಾಯತ್ ನಿವಾಸಿ 46 ವರ್ಷದ ವ್ಯಕ್ತಿ, ಕುವೈತ್ ನಿಂದ ಆಗಮಿಸಿದ್ದ ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 63 ವರ್ಷದ ನಿವಾಸಿ, ಯು.ಎ.ಇ.ಯಿಂದ ಬಂದಿದ್ದ ಚೆಮ್ನಾಡ್ ಗ್ರಾಮ ಪಂಚಾಯತ್ ನಿವಾಸಿ 49 ವರ್ಷದ ವ್ಯಕ್ತಿ, ಪಳ್ಳಿಕ್ಕರೆ ನಿವಾಸಿ 56, 51 ವರ್ಷದ ನಿವಾಸಿಗಳು, ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಸೆಂಟರ್‍ನಲ್ಲಿ ದಾಖಲಾಗಿದ್ದ, ಕುವೈತ್‍ನಿಂದ ಆಗಮಿಸಿದ್ದ ನೀಲೇಶ್ವರ ನಗರಸಭೆ ವ್ಯಾಪ್ತಿಯ 41 ವರ್ಷದ ನಿವಾಸಿಗೆ ಕೋವಿಡ್ ನೆಗೆಟಿವ್ ಆಗಿದೆ.
      ಜಿಲ್ಲೆಯಲ್ಲಿ 4899 ಮಂದಿ ನಿಗಾದಲ್ಲಿದ್ದಾರೆ. 4519 ಮಂದಿ ಮನೆಗಳಲ್ಲಿ, 380 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. ನೂತನವಾಗಿ ಸೋಮವಾರ 25 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 174 ಮಂದಿಯ ಫಲಿತಾಂಶ ಇನ್ನೂ ಲಭಿಸಿಲ್ಲ. 156 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣ ಗೊಳಿಸಿದ್ದಾರೆ.
                          ಕೇರಳದಲ್ಲಿ 138 ಮಂದಿಗೆ ಸೋಂಕು :
     ಕೇರಳ ರಾಜ್ಯದಲ್ಲಿ ಸೋಮವಾರ 138 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಮಲಪ್ಪುರಂ-17, ಪಾಲ್ಘಾಟ್-16, ಎರ್ನಾಕುಳಂ-14, ಕೊಲ್ಲಂ-13, ಕೋಟ್ಟಯಂ-13, ಆಲಪ್ಪುಳ-12, ತೃಶ್ಶೂರು-12, ತಿರುವನಂತಪುರ-11, ಕಾಸರಗೋಡು-9, ಕಲ್ಲಿಕೋಟೆ-5, ವಯನಾಡು-5, ಪತ್ತನಂತಿಟ್ಟ-4, ಇಡುಕ್ಕಿ-4, ಕಣ್ಣೂರು-3 ಎಂಬಂತೆ ರೋಗ ಬಾಧಿಸಿದೆ.
     ರೋಗ ಬಾಧಿತರಲ್ಲಿ 87 ಮಂದಿ ವಿದೇಶದಿಂದ ಹಾಗು 47 ಮಂದಿ ಇತರ ರಾಜ್ಯಗಳಿಂದ ಬಂದವರು. ನಾಲ್ವರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
         ಸೋಮವಾರ 88 ಮಂದಿ ಗುಣಮುಖರಾಗದ್ದಾರೆ. ಮಲಪ್ಪುರಂ-26 (ತಲಾ ಒಬ್ಬರಂತೆ ತೃಶ್ಶೂರು, ಆಲಪ್ಪುಳ, ಪಾಲ್ಘಾಟ್ ನಿವಾಸಿಗಳು), ಕಣ್ಣೂರು-18(ಇಬ್ಬರು ಕಾಸರಗೋಡು ನಿವಾಸಿಗಳು, ತಲಾ ಒಬ್ಬರಂತೆ ಕಲ್ಲಿಕೋಟೆ, ತೃಶ್ಶೂರು), ಪಾಲ್ಘಾಟ್-11, ಎರ್ನಾಕುಳಂ-9, ಕಲ್ಲಿಕೋಟೆ-7, ಕಾಸರಗೋಡು-7, ಕೋಟ್ಟಯಂ-4, ತೃಶ್ಶೂರು-4, ಇಡುಕ್ಕಿ-2 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ 1540 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 1747 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 1,47,351 ಮಂದಿ ನಿಗಾವಣೆಯಲ್ಲಿದ್ದಾರೆ.
            ಇವರಲ್ಲಿ 145225 ಮಂದಿ ಮನೆಗಳಲ್ಲೂ, ಇನ್‍ಸ್ಟಿಟ್ಯೂಟ್‍ಗಳಲ್ಲೂ ಕ್ವಾರೆಂಟೈನ್‍ನಲ್ಲಿದ್ದಾರೆ. 2126 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಸೋಮವಾರ ಶಂಕಿತ 241 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 1,85,903 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 2266 ಸ್ಯಾಂಪಲ್‍ಗಳ ಪರೀಕ್ಷಾ ವರದಿ ಬರಲು ಬಾಕಿಯಿದೆ.
ಮಾಸ್ಕ್ ಧರಿಸದ 203 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 203 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 8005 ಕೇಸುಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿ ದಾಖಲಿಸಲಾಗಿದೆ.
          ಲಾಕ್ ಡೌನ್ ಉಲ್ಲಂಘನೆ : 4 ಕೇಸು ದಾಖಲು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 4 ಕೇಸುಗಳನ್ನು ದಾಖಲಿಸಲಾಗಿದೆ. 4 ಮಂದಿಯನ್ನು ಬಂಧಿಸಲಾಗಿದ್ದು, ಒಂದು ವಾಹನವನ್ನು ವಶಪಡಿಸಲಾಗಿದೆ. ಕಾಸರಗೋಡು ನಗರಠಾಣೆಯಲ್ಲಿ 2, ಮೇಲ್ಪರಂಬ 1, ಚಂದೇರ 1 ಕೇಸುಗಳನ್ನು ದಾಖಲಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 2684 ಕೇಸುಗಳನ್ನು ದಾಖಲಿಸಲಾಗಿದೆ. 3374 ಮಂದಿಯನ್ನು ಬಂ„ಸಲಾಗಿದ್ದು, 1156 ವಾಹನಗಳನ್ನು ವಶಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries