ಕಾಸರಗೋಡು: ಹೊಸದುರ್ಗ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ನಲ್ಲಿ ಒಟ್ಟು 93 ದೂರುಗಳನ್ನು ಪರಿಗಣಿಸಿ, 87 ದೂರುಗಳಿಗೆ ಇಲಾಖಾ ಮಟ್ಟದಲ್ಲಿತೀರ್ಪು ಒದಗಿಸಲಾಗಿದೆ.
6 ದೂರುಗಳಿಗೆ ಜಿಲ್ಲಾಧಿಕಾರಿ ನೇರ ಹಸ್ತಕ್ಷೇಪ ನಡೆಸಿ ಪರಿಹಾರ ಒದಗಿಸಿದ್ದಾರೆ. ಜಿಲ್ಲಾಧಿಕಾರಿಡಾ.ಡಿ.ಸಜಿತ್ ಬಾಬು ಅವರು ನಡೆಸುತ್ತಿರುವ ತಾಲೂಕು ಮಟ್ಟದ ಆನ್ ಲೈನ್ ಅದಾಲತ್ ನಲ್ಲಿ ಮೂರನೇ ಅದಾಲತ್ ಇದಾಗಿತ್ತು. ಆನ್ ಲೈನ್ ಮೂಲಕ ಜಿಲ್ಲಧಿಕಾರಿ ಸಭಾಂಗಣದಲ್ಲಿ ಅದಾಲತ್ ಜರುಗಿತು.ಕಂದಾಯ ಸಚಿವ ಇ.ಚಂದ್ರಶೇಖರನ್ ಅತಿಥಿಯಾಗಿ ಅದಾಲತ್ ನಲ್ಲಿ ಭಾಗವಹಿಸಿ, ನೆರೆಹಾವಳಿಯಿಂದ ನಡೆದ ನಷ್ಟಕ್ಕೆ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಮಹಿಳೆಗೆ ಭರವಸೆ ನೀಡಿದರು. .ಹೊಸದುರ್ಗ ತಾಲೂಕಿನಲ್ಲಿ ಈ ಪ್ರಕರಣಗಳಿಗೆ ಸಂಬಂಧಿಸಿ 33 ಮಂದಿಗೆ ಆರ್ಥಿಕ ಸಹಾಯ ನೀಡಲು ಬಾಕಿಯಿದೆ. ತಾಂತ್ರಿಕಸಮಸ್ಯೆಗಳಿಂದ ಈ ವಿಳಂಬವಾಗಿದ್ದು, ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.


