HEALTH TIPS

ಚಿನ್ಮಯ ವಿದ್ಯಾರ್ಥಿಗಳಿಗೆ ನುರಿತ ಅಧ್ಯಾಪಕರಿಂದ ಆನ್‍ಲೈನ್ ತರಗತಿಗಳು

 
      ಕಾಸರಗೋಡು: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಸಾಂಕ್ರಾಮಿಕ ರೋಗ ಶೈಕ್ಷಣಿಕ ವಲಯವನ್ನೇ ತಟಸ್ಥಗೊಳಿಸಿರುವ ಈ ಕಾಲಘಟ್ಟದಲ್ಲಿ ವಿದ್ಯಾನಗರ ಚಿನ್ಮಯ ವಿದ್ಯಾಲಯದ ಅಧ್ಯಾಪಕ ವೃಂದದವರು ಆನ್‍ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳ ಮುಂದೆ ಮತ್ತೆ ಪ್ರತ್ಯಕ್ಷಗೊಂಡಿರುವರು.
      ಒಂದೆರಡು ವಾರಗಳ ತರಬೇತಿಯನ್ನು ಹೊಂದಿದ ಅಧ್ಯಾಪಕರು ಆಸಕ್ತಿಯುತವೂ ಸರಳವೂ ಆದ ಶೈಲಿಯಲ್ಲಿ ಈ ನೂತನ ಪದ್ಧತಿಯನ್ನು ವಿದ್ಯಾರ್ಥಿಗಳ ಮುಂದಿರಿಸುವಲ್ಲಿ ಸಫಲರಾಗಿದ್ದಾರೆ. ಎಂತಹದೇ ಸಂದಿಗ್ಧ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಕೂಡದೆಂಬುದೇ ವಿದ್ಯಾಲಯದ ಧ್ಯೇಯವಾಗಿದೆ. ನುರಿತ ಅಧ್ಯಾಪಕರ ತರಗತಿಗಳನ್ನು ಸಂಪೂರ್ಣವಾಗಿ ಪ್ರಯೋಜನ ಪಡಿಸಿಕೊಳ್ಳಬೇಕೆಂದು ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ಷಾನಂದ ಸರಸ್ವತಿಜಿ ಹಾಗು ಪ್ರಾಂಶುಪಾಲ ಬಿ.ಪುಷ್ಪರಾಜ್ ವಿದ್ಯಾರ್ಥಿಗಳಲ್ಲಿಯೂ, ಹೆತ್ತವರಲ್ಲಿಯೂ ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries