HEALTH TIPS

ವೆಳ್ಳರಿಕುಂಡ್ ತಾಲೂಕು ದೂರು ಪರಿಹಾರ ಅದಾಲತ್

 
              ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಆನ್ ಲೈನ್ ದೂರು ಪರಿಹಾರ ಅದಾಲತ್ ಅಂಗವಾಗಿ ವೆಳ್ಳರಿಕುಂಡ್ ತಾಲೂಕು ಮಟ್ಟದ ಅದಾಲತ್ ಜರುಗಿತು. ಒಟ್ಟು 8 ದೂರುಗಳನ್ನು ಈ ವೇಳೆ ಪರಿಶೀಲಿಸಲಾಗಿದೆ.
          6 ದೂರುಗಳನ್ನು ಇಲಾಖಾ ಮಟ್ಟದಲ್ಲಿ ಪರಿಹರಿಸಲಾಗಿದೆ. 2 ದೂರುಗಳಲ್ಲಿ ಜಿಲ್ಲಾಧಿಕಾರಿ ನೇರ ಹಸ್ತಕ್ಷೇಪ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆ. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾ„ಕಾರಿ ಅರುಣ್ ಕೆ.ವಿಜಯನ್, ವೆಳ್ಳರಿಕುಂಡ್ ತಹಸೀಲ್ದಾರ್ ಪಿ.ಕುಂಞÂಕಣ್ಣನ್, ಸಹಾಯಕ ತಹಶೀಲ್ದ್ದಾರ್ ಭಾಸ್ಕರನ್ ಉಪಸ್ಥಿತರಿದ್ದರು. ವೆಳ್ಳರಿಕುಂಡ್ ತಾಲೂಕು ಮಟ್ಟದ ಮುಂದಿನ ಆನ್‍ಲೈನ್ ಅದಾಲತ್ ಜು.18ರಂದು ನಡೆಯಲಿದ್ದು, ಈ ಸಂಬಂಧ ಅರ್ಜಿಗಳನ್ನು ಜು.13ರಂದು ರಾತ್ರಿ 12 ಗಂಟೆ ವರೆಗೆ ಸಲ್ಲಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries