ಕಾಸರಗೋಡು: ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಬಿಗಿ ಜಾಗ್ರತೆ ಏರ್ಪಡಿಸಲಾಗಿದೆ. ಜಿಲ್ಲೆಯ 4 ಪ್ರದೇಶಗಳ ಮಂದಿ ರೂಂ ಕ್ವಾರೆಂಟೈನ್ ಗೆ ಒಳಗಾಗುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ.
ಜು.5 ರಂದು ಮತ್ತು ಆ ಬಳಿಕ ಕಾಸರಗೋಡು ಮಾರುಕಟ್ಟೆಗೆ ತೆರಳಿದ್ದವರು, ಚೆಂಗಳದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮನೆಗೆ ಜು.3 ಯಾ ತದನಂತರ ಸಂದರ್ಶಿಸಿದವರು, ಜು.6ರಂದು ಯಾÁ ಬಳಿಕ ಕುಂಬಳೆಯ ಮಾರುಕಟ್ಟೆಗೆ ತೆರಳಿದ್ದವರು, ಜು.12ರಂದು ಯಾ ತದನಂತರ ಮಂಜೇಶ್ವರ ಪಂಚಾಯತ್ ನ 11,13,14 ವಾರ್ಡ್ ಗಳಲ್ಲಿ ಫುಟ್ ಬಾಲ್ ಪಂದ್ಯಾಟಗಳಲ್ಲಿ ಭಾಗಿಯಾದವರು, ಕಡ್ಡಾಯವಾಗಿ 14 ದಿನಗಳ ರೂಂ ಕ್ವಾರಂಟೈನ್ ಗೆ ಒಳಗಾಗುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಈ ಮಂದಿ ಯಾವ ಕಾರಣಕ್ಕೂ ಕುಟುಂಬದ ಸದಸ್ಯರೊಂದಿಗೆ, ಸಾರ್ವಜನಿಕರೊಂದಿಗೆ ಸಂಪರ್ಕ ನಡೆಸ ಬಾರದು. ಈ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿರುವರು.


