ತಿರುವನಂತಪುರಂ: ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಎನ್ಐಎ ತನಿಖೆ ಎದುರಿಸುತ್ತಿರುವ ಆರೋಪಿ ಸ್ವಪ್ನಾ ಸುರೇಶ್ ವಿರುದ್ಧ ಸುಳ್ಳು ಸರ್ಟಿಫಿಕೇಟ್ ಮತ್ತು ವಂಚನೆ ಸೇರಿದಂತೆ ಆರು ಅಪರಾಧಗಳಿಗೆ ದೂರು ದಾಖಲಿಸಲಾಗುವುದು. ತಿರುವನಂತಪುರ ಕಂಟೋನ್ಮೆಂಟ್ ಪೆÇಲೀಸರು ಈ ಕ್ರಮ ಕೈಗೊಂಡಿದ್ದಾರೆ. ನಕಲಿ ಪದವಿ ಪ್ರಮಾಣಪತ್ರ ನೀಡಲಾಗಿದೆ ಎಂದು ಐಟಿ ಇಲಾಖೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೆÇಲೀಸರು ಈ ಪ್ರಕರಣ ದಾಖಲಿಸಿದ್ದಾರೆ.
ಸ್ವಪ್ನಾ ಸುರೇಶ್ ವಿರುದ್ಧದ ವಿಚಾರಣೆಯನ್ನು ತೀವ್ರಗೊಳಿಸಿದ ಬಳಿಕ ಕನ್ಸಲ್ಟೆನ್ಸಿ ಸಂಸ್ಥೆ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಮತ್ತು ವಿಷನ್ ಟೆಕ್ ವಿರುದ್ಧ ಎರಡನೇ ಪ್ರಕರಣ ದಾಖಲಿಸಲಾಗಿದೆ. ಬಾಹ್ಯಾಕಾಶ ಉದ್ಯಾನವನದ ಕಾರ್ಯಾಚರಣೆ ವ್ಯವಸ್ಥಾಪಕ ಸ್ಥಾನಕ್ಕಾಗಿ ನಕಲಿ ದಾಖಲೆಯನ್ನು ಸ್ವಪ್ನಾ ಸಲ್ಲಿಸಿರುವುದು ಖಚಿತಗೊಂಡಿದೆ. ತನ್ನ ನಂಬಿಕೆಗೆ ದ್ರೋಹ ಬಗೆದು ಮೋಸ ಮಾಡುವ ಮೂಲಕ ಕೆಲಸ ಗಿಟ್ಟಿಸುವ ಉದ್ದೇಶದಿಂದ ಸ್ವಪ್ನಾ ನಕಲಿ ದಾಖಲೆಯನ್ನು ರೂಪಿಸಿದ್ದಾಳೆ ಎಂದು ಎಫ್ ಐ ಆರ್ ನಲ್ಲಿ ಆರೋಪಿಸಲಾಗಿದೆ.
ಏತನ್ಮಧ್ಯೆ, ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರನ್ನು ಎನ್ ಐ ಎ ವಶಕ್ಕೆ ತೆಗೆದುಕೊಂಡಿದೆ. ಎನ್ ಐ ಎ ಕಸ್ಟಡಿ ಅರ್ಜಿಯನ್ನು ಆಲಿಸಿದ ವಿಶೇಷ ನ್ಯಾಯಾಲಯ ಜುಲೈ 21 ರವರೆಗೆ ಇಬ್ಬರನ್ನು ಕಸ್ಟಡಿಯಲ್ಲಿ ಇರಿಸಲಿದೆ.
ಚಿನ್ನದ ಕಳ್ಳಸಾಗಣೆಯು ತಮ್ಮ ರಾಜತಾಂತ್ರಿಕ ಸರಕು ಅಲ್ಲ ಎಂದು ಯುಎಇ ಸ್ಪಷ್ಟಪಡಿಸಿತ್ತು. ಎನ್ಐಎ ಸೋಮವಾರ ನ್ಯಾಯಾಲಯಕ್ಕೆ ನೀಡಿದ ವರದಿಯು ಇದನ್ನು ಖಚಿತಪಡಿಸಿದೆ. ನಕಲಿ ದಾಖಲೆ ಪತ್ರ ಯುಎಇಯಲ್ಲಿದೆ. ರಾಯಭಾರ ಕಚೇರಿಯ ಲಾಂಛನ ಮತ್ತು ಮುದ್ರೆಯನ್ನು ನಕಲಿ ಮಾಡಲಾಗಿದೆ ಎಂದು ಎನ್ ಐ ಎ ಪತ್ತೆಹಚ್ಚಿದೆ. ಕಾನೂನು ಬಾಹಿರವಾಗಿ ಕೇರಳಕ್ಕೆ ಕಳುಹಿಸಲಾಗುವ ಚಿನ್ನವನ್ನು ಆಭರಣ ವ್ಯಾಪಾರಿಗಳಿಗೆ ಮಾರಲಾಗುತ್ತಿತ್ತೇ ಎಂದು ಸಂಶಯಿಸಲಾಗಿತ್ತು. ಆದರೆ ಬೆಚ್ಚಿ ಬೀಳಿಸುವ ತನಿಖಾ ವರದಿಯಂತೆ ಅದು ಭಯೋತ್ಪಾದಕ ಚಟುವಟಿಕೆಗಳಿಗೆ ಮೂಲಧನವಾಗಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ.


