ತಿರುವನಂತಪುರಂ: ರಾಜ್ಯ ಸರ್ಕಾರದ ವರ್ಚಸ್ಸಿಗೆ ಕುಂದುತಂದ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತೀವ್ರಗೊಳಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಶಿವಶಂಕರ್ ಅವರನ್ನು ಎನ್ ಐ ಎ ನಿನ್ನೆ ಅನಿರೀಕ್ಷಿತವಾಗಿ ಮತ್ತೆ ಪ್ರಶ್ನಿಸಿತು. ಪೆರೂರ್ಕಾಡಾ ಪೆÇಲೀಸ್ ಕ್ಲಬ್ನಲ್ಲಿ ವಿಚಾರಣೆ ನಡೆಯಿತು. ಎನ್ ಐ ಎ ಯ ತನಿಖೆ ಗೌಪ್ಯವಾಗಿ ವಿಶೇಷ ಬೆಳವಣಿಗೆಯೆಂದೇ ಹಳಲ್ಪಟ್ಟಿತು.
ಶಿವಶಂಕರ್ ಅವರನ್ನು ಕೊಚ್ಚಿಯ ಎನ್ ಐ ಎ ತಂಡ ಪ್ರಶ್ನಿಸಿತು. ಎನ್ ಐ ಎ ಅಧಿಕಾರಿಗಳು ನಿನ್ನೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಪೂಜಾಪ್ಪುರದ ಅವರ ಮನೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಅವರು ಸ್ಕೂಟರ್ನಲ್ಲಿ ಬಂದರು. ನಂತರ ಶಿವಶಂಕರ್ ಅವರು ಮನೆಯ ಹಿಂದಿನ ರಸ್ತೆಯ ಮೂಲಕ ಪೆÇಲೀಸ್ ಕ್ಲಬ್ಗೆ ಹಿಂತಿರುಗಿದರು.
ಇದಕ್ಕೂ ಮೊದಲು ಕಸ್ಟಮ್ಸ್ ಅಧಿಕೃತರು ಶಿವಶಂಕರ್ ಅವರನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ಪ್ರಶ್ನಿಸಿತ್ತು. ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಮೊದಲ ಆರೋಪಿ ಸರಿತ್ ಶಿವಶಂಕರ್ ವಿರುದ್ಧ ಹೇಳಿಕೆ ನೀಡಿದ್ದರು. ಪ್ರಕರಣದಲ್ಲಿ ಆರೋಪಿಗಳಾದ ಸ್ವಪ್ನಾ ಮತ್ತು ಸರಿತ್ ಸಂದೀಪ್ ಅವರೊಂದಿಗೆ ಶಿವಶಂಕರ್ ನಿಕಟ ಸಂಬಂಧ ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿಯೇ ಮತ್ತೆ ಎನ್ಐಎ ಪ್ರಶ್ನಿಸಿದೆ ಎನ್ನಲಾಗಿದೆ.
ಶಿವಶಂಕರ್ ವಿರುದ್ಧ ಆರೋಪಿಗಳ ಹೇಳಿಕೆ ನಿರ್ಣಾಯಕವಾಗಿದೆ ಎಂದು ತನಿಖಾ ತಂಡ ತಿಳಿಸಿದೆ. ಶಿವಶಂಕರ್ ಈ ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿದ್ದರೆ, ಮುಂದಿನ ಕ್ರಮ ಕೈಗೊಳ್ಳಲು ಎನ್ಐಎ ನಿರ್ಧರಿಸಿದೆ. ಆರೋಪಿಗಳಿಗೆ ಫ್ಲ್ಯಾಟ್ಗಳನ್ನು ನೀಡಿದ ಶಿವಶಂಕರ್ ಅವರು ಆಯೋಜಿಸಿದ್ದ ಪಾರ್ಟಿಗಳಲ್ಲೂ ಸಕ್ರಿಯವಾಗಿ ಹಾಜರಿದ್ದರು. ಇಂತಹ ಚಟುವಟಿಕೆಗಳ ಹಿನ್ನೆಲೆಯಲ್ಲಿ ಎನ್ ಐ ಎ ಪದೇ ಪದೇ ಅವರನ್ನು ತನಿಖಾ ವಿಧೇಯಗೊಳಿಸುತ್ತಿದೆ.


