ಕುಂಬಳೆ: ಕುಂಬಳೆ ಪೆÇಲೀಸ್ ಠಾಣೆ ವ್ಯಾಪ್ತಿಯ ಮುಟ್ಟಂಗೇಟ್ ಬಳಿ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಆರೋಪದಲ್ಲಿ ಟಿಪ್ಪರ್ ಲಾರಿಯೊಂದನ್ನು ಪೆÇಲೀಸರು ವಶಪಡಿಸಿದ್ದಾರೆ.
ಕಾಸರಗೋಡು ಡಿ.ವೈ.ಎಸ್.ಪಿ. ಬಾಲಕೃಷ್ಣನ್ ನೇತೃತ್ವದಲ್ಲಿ ಕ್ಷಿಪ್ರದಳ ಮತ್ತು ಕುಂಬಳೆ ಪೆÇಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಾರಿಯನ್ನು ವಶಪಡಿಸಲಾಗಿದೆ.
ಇದೇ ಆರೋಪದಲ್ಲಿ ದಿನಗಳ ಹಿಂದೆ ಕಾಸರಗೋಡು ನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ತುರ್ತಿ ಮತ್ತು ಕುಂಬಳೆ ಪೆÇಲೀಸ್ ಠಾಣೆ ವ್ಯಾಪ್ತಿಯ ಬತ್ತೇರಿಯಿಂದ ತಲಾ ಒಂದು ಟಿಪ್ಪರ್ ಲಾರಿಗಳನ್ನು ವಶಪಡಿಸಲಾಗಿತ್ತು. ಕಳೆದ ತಿಂಗಳು ಮಂಜೇಶ್ವರ ಪೆÇಲೀಸ್ ಠಾಣೆ ವ್ಯಾಪ್ತಿಯ ನದಿತಟದಿಂದ ಇದೇ ಆರೋಪದಲ್ಲಿ 300 ಟನ್ ಮರಳು ವಶಪಡಿಸಿದ್ದು, ಈ ಸಂಬಂಧ ಆರೋಪಿಗಳಿಂದ 3 ಲಕ್ಷ ರೂ. ದಂಡ ವಸೂಲಿ ಮಾಡಲಾಗಿತ್ತು.

