ಕಾಸರಗೋಡು: ಜಿಲ್ಲಾ ನಾಗರಿಕ ಸರಬರಾಜು ಇಲಾಖೆ, ಆಂತ್ಯೋದಯ (ಹಳದಿ) ಆದ್ಯತಾ ಕಾರ್ಡ್ಗಳು (ಪಿಂಕ್) ಕಾರ್ಡ್ಗಳಲ್ಲಿ ಪಡಿತರ ಪಡೆದವರಿಂದ ವಸ್ತುಗಳನ್ನು ಖರೀಸುವವರ ವಿರುದ್ದ ಕಠಿಣ ಕಾನೂನು ಜರಗಿಸಲಾಗುವುದೆಂದು ಜಿಲ್ಲಾ ಆಹಾರ ಪೂರೈಕೆ ಇಲಾಖೆ ಎಚ್ಚರಿಕೆ ನೀಡಿದೆ.
ಕೆಲವು ಗ್ರಾಹಕರು ಪಡಿತರ ಅಂಗಡಿಯಿಂದ ಖರೀದಿಸುವ ಅಕ್ಕಿ, ಗೋಧಿ, ಸಕ್ಕರೆ ಗಳನ್ನು ಅಂಗಡಿಗಳಲ್ಲಿ ವಿಕ್ರಯಿಸುತ್ತಿದ್ದಾರೆ ಎಂಬ ಬಹಳಷ್ಟು ದೂರಿನ ಹಿನ್ನೆಲೆಯಲ್ಲಿ ಆಹಾರ ಪೂರೈಕೆ ಇಲಾಖೆ ಎಚ್ಚೆತ್ತುಕೊಂಡು ಕಠಿಣ ನಿಲುವುಗಳಿಗೆ ಮುಂದಾಗಿದೆ. ಅನರ್ಹರಾಗಿರುವ ಎಲ್ಲಾ ಹಳದಿ ಮತ್ತು ಪಿಂಕ್ ಕಾರ್ಡ್ ಹೊಂದಿರುವವರನ್ನು ಜುಲೈ 18 ರೊಳಗೆ ಆಯಾ ತಾಲೂಕು ಸರಬರಾಜು ಕಚೇರಿಗಳಿಗೆ ತೆರಳಿ ಸಾರ್ವಜನಿಕರಿಗೆ ವರ್ಗಾಯಿಸುವ ಮೂಲಕ ಕಾನೂನು ಪ್ರಕ್ರಿಯೆಯಿಂದ ಬಚವಾಗಲು ಅವಕಾಶ ಇದೆ. ಇಲ್ಲದಿದ್ದರೆ, ತಾಲ್ಲೂಕು ಸರಬರಾಜು ಅಧಿಕಾರಿಗಳು ಮತ್ತು ರೇಷನಿಂಗ್ ಇನ್ಸ್ಪೆಕ್ಟರ್ಗಳನ್ನು ಒಳಗೊಂಡ ತಂಡವು ಮನೆಗಳಿಗೆ ಹೋಗಿ ಕಾರ್ಡ್ ಸಂಗ್ರಹಿಸಿ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಸರಬರಾಜು ಅಧಿಕಾರಿ ವಿ.ಕೆ.ಶಶಿಧರನ್ ತಿಳಿಸಿದ್ದಾರೆ.
ಪಡಿತರ ಚೀಟಿಯ ಎಲ್ಲ ಸದಸ್ಯರನ್ನು 18 ರೊಳಗೆ ಆಧಾರ್ಗೆ ಲಿಂಕ್ ಮಾಡಬೇಕು:
ಜಿಲ್ಲೆಯ ಪಡಿತರ ಚೀಟಿಗಳ ಮಾಸಿಕ ಪಡಿತರ ಪಾಲು ಮತ್ತು ಪಿಎಂಜಿಕೆ,ಎವೈಎ ಸೇವೆಗಳು ಉಚಿತವಾಗಿರುವುದಾಗಿದ್ದು ಆಧಾರ್ ಆಧಾರ್ ಲಿಂಕ್ ಕಡ್ಡಾಯವಾಗಿದೆ. ಪಡಿತರ ಕಾರ್ಡ್ ನಲ್ಲಿರುವ ಒಬ್ಬ ಸದಸ್ಯನಾದರೂ ಆಧಾರ್ ಲಿಂಕ್ ಇಲ್ಲದಿದ್ದರೆ ಪಡಿತರ ವಿತರಿಸಲಾಗದು ಎಂದು ಜಿಲ್ಲಾ ಸರಬರಾಜು ಅಧಿಕಾರಿ ಎಚ್ಚರಿಸಿದ್ದಾರೆ. ಜುಲೈ 18 ರೊಳಗೆ ಎಲ್ಲಾ ಪಡಿತರ ಅಂಗಡಿಗಳು, ಅಕ್ಷಯ ಕೇಂದ್ರಗಳು ಮತ್ತು ತಾಲ್ಲೂಕು ಸರಬರಾಜು ಕಚೇರಿಗಳಿಗೆ ಆಧಾರ್ ಕಾರ್ಡ್ ಕಳುಹಿಸಬೇಕು ಎಂದು ಜಿಲ್ಲಾ ಸರಬರಾಜು ಅಧಿಕಾರಿ ತಿಳಿಸಿದ್ದಾರೆ. ದೈಹಿಕ ಅಂಗವೈಕಲ್ಯ / ಅನಾರೋಗ್ಯದಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಎಲ್ಲಾ ಆಧಾರ್ ಸಂಪರ್ಕೇತರರನ್ನು ಯಾವುದೇ ಎಚ್ಚರಿಕೆ ಇಲ್ಲದೆ ಪಡಿತರ ಚೀಟಿಯಿಂದ ತೆಗೆದುಹಾಕಲಾಗುತ್ತದೆ. ಆಧಾರ್ ಸಂಪರ್ಕವಿಲ್ಲದ ಮಾಹಿತಿಯು ಆಯಾ ಪಡಿತರ ಅಂಗಡಿಗಳಲ್ಲಿ ಲಭ್ಯವಿದೆ.
ಹೆಚ್ಚಿನ ಮಾಹಿತಿಗೆ ಕಾಸರಗೋಡು ತಾಲ್ಲೂಕು ಸರಬರಾಜು ಕಚೇರಿ - 04994 230108/9188527412, ಹೊಸದುರ್ಗ ತಾಲ್ಲೂಕು ಸರಬರಾಜು ಕಚೇರಿ - 04672204044/9188527413, ಮಂಜೇಶ್ವರ ತಾಲ್ಲೂಕು ಸರಬರಾಜು ಕಚೇರಿ - 04998240089/9188527415, ವೆಳ್ಳೆರಿಕುಂಡು 14672242720/9188527414 ಸಂಪರ್ಕಿಸಬಹು ದಾಗಿದೆ.

