ತಿರುವನಂತಪುರ: ರಾಜ್ಯದಲ್ಲಿ ಹೊಸ ಕೋವಿಡ್ ಮಾನದಂಡ ಪ್ರಕಟಿಸಲಾಗಿದೆ. ಕೋವಿಡ್ ನ ಚಿಕಿತ್ಸೆಗೊಳಗಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು ಕಡ್ಡಾಯ ಸಂಪರ್ಕತಡೆಯನ್ನು ಇನ್ನು ಮುಂದೆ ಪಾಲಿಸಲೇ ಬೇಕೆಂದು ಇಲ್ಲ ಎಂಬ ನಿಯಮ ಜಾರಿಗೊಳಿಸಲಾಗಿದೆ. ಆದರೆ ಕೋವಿಡ್ ರೋಗಿಯೊಂದಿಗೆ ನೇರ ಸಂಪರ್ಕಕ್ಕೆ ಬಂದು ಹೆಚ್ಚಿನ ಅಪಾಯದ ವಿಭಾಗದಲ್ಲಿರುವವರು ಮಾತ್ರ ಇನ್ನೂ 14 ದಿನಗಳವರೆಗೆ ಸಂಪರ್ಕತಡೆಗೆ ಒಳಗಾಗಬೇಕಾಗುತ್ತದೆ.
ಕಡಿಮೆ ಅಪಾಯದ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೆ ಚಿಕಿತ್ಸಾ ಕೇಂದ್ರಗಳಲ್ಲಿ ಇನ್ನು ಉಳಿಯುವ ಅಗತ್ಯ ಇರುವುದಿಲ್ಲ. ಆದರೆ ಸಾರ್ವಜನಿಕ ಸ್ಥಳಗಳ ಭೇಟಿ ಮತ್ತು ಪ್ರಯಾಣಗಳಿಂದ ಹೊರತಾಗಿರುವುದು ಒಳಿತೆಂದು ನಿರ್ದೇಶಿಸಲಾಗಿದೆ. ದ್ವಿತೀಯ ಸಂಪರ್ಕದಲ್ಲಿರುವವರಿಗೂ ಈ ಸಲಹೆ ಅನ್ವಯಿಸುತ್ತದೆ. ಕೇರಳದ ಹೊರಗಿನಿಂದ ಬರುವವರಿಗೆ 14 ದಿನಗಳವರೆಗೆ ಕ್ಯಾರೆಂಟೈನ್ ಕಡ್ಡಾಯವಾಗಿದೆ.


