ಕಾಸರಗೋಡು: ಓಣಂ ಹಬ್ಬ ವೇಳೆ ಸಾರ್ವಜನಿಕ ಸಂಭ್ರಮಚರಣೆ ಸಲ್ಲದು ಎಂದು ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ತಿಳಿಸಿರುವರು.
ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಪ್ರಕಟಿಸಲಾಗಿದೆ. ತಮ್ಮ ಮನೆಗಳಲ್ಲಿದ್ದುಕೊಂಡೇ ಗರಿಷ್ಠ ಮಟ್ಟದಲ್ಲಿ ಆನ್ ಲೈನ್ ರೂಪದಲ್ಲೇ ಕಲಾ-ಸಾಂಸ್ಕøತಿಕ ಸ್ಪರ್ಧೆಗಳನ್ನು ನಡೆಸಲಿ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ, ಸಾಂಸ್ಕೃತಿಕ ವಲಯಗಳ ಪದಾಧಿಕಾರಿಗಳು ಯತ್ನಿಸಬೇಕು. ಯಾವುದೋ ಸಂಘ-ಸಂಸ್ಥೆಗಳ ಆವರಣಗಳಲ್ಲಿ ಜನಗುಂಪುಗೂಡಿ ಓಣಂ ಸಂಭ್ರಮಾಚರಣೆ ನಡೆಸಕೂಡದು. ಎಲ್ಲರೂ ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಹಬ್ಬಾಚರಣೆ ನಡೆಸಬೇಕು, ಸುರಕ್ಷೆ ಅಂಗವಾಗಿ ಪೆÇಲೀಸರು ಏರ್ಪಡಿಸಿರುವ ನಿಯಂತ್ರಗಳನ್ನು ಪಾಲಿಸಿ ಸಹಕರಿಸಬೇಕು ಎಂದವರು ಕರೆನೀಡಿರುವರು.


