ಕಾಸರಗೋಡು: ಓಣಂ ಹಬ್ಬದ ಅವಧಿಯಲ್ಲಿ ಅಗತ್ಯವಿರುವ ಜಾಗೃತಿ ಮೂಡಿಸುವಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಐ.ಇ.ಸಿ. ತಂಡಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿನಂದನೆ ತಿಳಿಸಿದ್ದಾರೆ. ಜಿಲ್ಲಾ ಮಟ್ಟದ ಕೊರೋಆ ಸಮಿತಿಯ ವೀಡೀಯೋ ಕಾನ್ಸ್ ಫೆರೆನ್ಸ್ ನಲ್ಲಿ ಅವರು ಈ ವಿಚಾರ ತಿಳಿಸಿದರು.
ಓಣಂ ಶಾಪಿಂಗ್ ಗಾಗಿ ಯಾರೂ ಕುಟುಂಬ ಸಮೇತ ತೆರಳಕೂಡದು ಎಂಬ ಬಗ್ಗೆ ಖಚಿತಪಡಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಗಳು ಕ್ರಮ ಕೈಗೊಳ್ಳಬೇಕು. ಈ ಆದೇಶದ ಉಲ್ಲಂಘನೆ ಯಾರಾದರೂ ನಡೆಸಿದಲ್ಲಿ ಮಾಸ್ಟರ್ ಯೋಜನೆಯ ಮೊಬೈಲ್ ನಂಬ್ರ"8590684023"ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

