HEALTH TIPS

ನಿರುದ್ಯೋಗಿಗಳ ಆತ್ಮಹತ್ಯೆಗಳಲ್ಲಿ ಕೇರಳ ಅಗ್ರಸ್ಥಾನದಲ್ಲಿ- ಸರ್ಕಾರ ಕಣ್ಣು ತೆರೆಯಬೇಕು: ಉಮ್ಮನ್ ಚಾಂಡಿ

 

          ತಿರುವನಂತಪುರ: ರಾಷ್ಟ್ರದಲ್ಲೇ ಕೇರಳದಲ್ಲಿ ಅತಿ ಹೆಚ್ಚು ನಿರುದ್ಯೋಗಿ ಆತ್ಮಹತ್ಯೆಗಳು ನಡೆಯುತ್ತಿವೆ ಎಂಬ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ 'ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು 2019' ವರದಿಯನ್ನು ರಾಜ್ಯ ಸರ್ಕಾರ ಭಾರೀ ಜವಾಬ್ದಾರಿಯುತವಾಗಿ ಮನಗಾಣಬೇಕು ಎಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ.

      2019 ರಲ್ಲಿ ಕೇರಳದಲ್ಲಿ 1,963 ನಿರುದ್ಯೋಗಿಗಳು ಸಾವನ್ನಪ್ಪಿದ್ದಾರೆ. ಭಾರತದಾದ್ಯಂತ ಆತ್ಮಹತ್ಯೆ ಮಾಡಿಕೊಂಡ ನಿರುದ್ಯೋಗಿಗಳ ಸಂಖ್ಯೆ 14,019. ಕೇರಳದಲ್ಲಿ ನಿರುದ್ಯೋಗ ದರ ಶೇ.14ರಷ್ಟಿದೆ. ಮಹಾರಾಷ್ಟ್ರವು ಶೇ.10.8, ತಮಿಳುನಾಡು ಶೇ.9.8 ಮತ್ತು ಕರ್ನಾಟಕದಲ್ಲಿ ಶೇ.9.2 ರಷ್ಟಿದೆ.

     ಕಾರಕೋಣಂನ ಪುತೆನ್‍ವೆಟ್ಟಿಲ್‍ನಲ್ಲಿ ಎಸ್ ಅನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿ ಇದು ಒಂದು ಪ್ರತ್ಯೇಕ ಘಟನೆ ಎಂದು ಹೇಳುವ ಮೂಲಕ ಸರ್ಕಾರ ಮತ್ತು ಪಿಎಸ್‍ಸಿ ತಮ್ಮನ್ನು ತಾವು ಜವಾಬ್ದಾರಿಯಿಂದ ಜಾರಿಗೊಂಡಿವೆ. ಅವರು ಪಿಎಸ್‍ಸಿ ನೇಮಕಾತಿಯ ಅವ್ಯವಹಾರವನ್ನು ಮುಚ್ಚಹಾಕಲು ಯತ್ನಿಸುತ್ತಿದೆ. ಅನು ಅವರ ಆತ್ಮಹತ್ಯೆ ಒಂದು ಪ್ರತ್ಯೇಕ ಘಟನೆಯಲ್ಲ ಎಂದು ವರದಿ ತಿಳಿಸುತ್ತದೆ ಎಂದು ಚಾಂಡಿ ಬೊಟ್ಟುಮಾಡಿದರು.

      ಅನು ಅವರಂತೆ, 1963 ರಷ್ಟು ಆತ್ಮಹತ್ಯೆಗಳ ಹಿಂದೆ ಹಲವಾರು ಸರ್ಕಾರದ ವೈಫಲ್ಯಗಳಿವೆ. ಎಲ್ಲಾ ಉದ್ಯೋಗಾವಕಾಶಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದ್ದುದರಿಂದ  ಪಿಎಸ್‍ಸಿ ಪಟ್ಟಿಯ ಅವಧಿಯನ್ನು ವಿಸ್ತರಿಸಲು ನಿರಾಕರಿಸುವುದು ಮೊದಲ ಕಾರಣವಾಗಿದೆ ಎಂದರು.  ಪಿಎಸ್‍ಸಿಯು ಪಟ್ಟಿ ತಯಾರಿಸದೆ  ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿದೆ ಮತ್ತು ತನ್ನದೇ ಆದ ಜನರು, ಸಂಬಂಧಿಕರು ಮತ್ತು ಪಕ್ಷದ ಸದಸ್ಯರನ್ನು ನೇಮಿಸಿಕೊಂಡಿದೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಮತ್ತು ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ನಿರ್ವಹಿಸುವಲ್ಲಿ ಸರ್ಕಾರ ಶೋಚನೀಯವಾಗಿ ವಿಫಲವಾಗಿದೆ. ಮಲಯಾಳಿಗಳು ಕೇರಳದ ಹೊರಗೆ ಮತ್ತು ವಿದೇಶದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದು ಇದು ಸರ್ಕಾರದ ಬೇಜವಾಬ್ದಾರಿಯ ಸಾಕ್ಷಿಯೆಂದು ಅವರು ತಿಳಿಸಿದರು. 

       ಕೇರಳದಲ್ಲಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ 43.3 ಲಕ್ಷ ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ. ಕೇರಳವು ಭಾರತದಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣವನ್ನು ಹೊಂದಿದೆ (ಶೇ.11.4) ಎನ್ನುವುದನ್ನು ಉಮ್ಮನ್ ಚಾಂಡಿ ಎತ್ತಿತೋರಿಸಿದರು.

        ಅಖಿಲ ಭಾರತ ಮಟ್ಟದಲ್ಲಿ ಇದು ಕೇವಲ ಶೇ. 6.0 ಮಾತ್ರ. ಸರ್ಕಾರಿ ಸ್ವಾಮ್ಯದ ಉದ್ಯೋಗಗಳು ಬೆರಳೆಣಿಕೆಯಷ್ಟು ಮಾತ್ರವಿದ್ದು ಅದು ಶೇ. 43.3 ಲಕ್ಷ ಮಾತ್ರ ಇದೆ.  ಅನರ್ಹರಿಗೆ ಉದ್ಯೋಗ ಅವಕಾಶ ನೀಡುವುದರಿಂದ ಅರ್ಹರ ಬದುಕು ಸಂಕಷ್ಟಕ್ಕೊಳಗಾಗುವುದನ್ನು ಸರ್ಕಾರ ಮನಗಾಣಬೇಕು ಎಂದರು. ಹೊಸ ಪಿಎಸ್‍ಸಿ ಪಟ್ಟಿ ಹೊರಬರುವವರೆಗೂ ಯುಡಿಎಫ್ ಸರ್ಕಾರಕ್ಕೆ ನಾಲ್ಕೂವರೆ ವರ್ಷಗಳ ಕಾಲ ವಿಸ್ತರಿಸಿದ ಇತಿಹಾಸವಿದೆ. ಸರ್ಕಾರ ಹಿಂಬಾಗಿಲ ನೇಮಕಾತಿ ಮಾಡುವುದರಿಂದ ಪಿಎಸ್ಸಿ ಪಟ್ಟಿಯಲ್ಲಿ ಹೆಸರು ಹೊಂದಿರುವವರನ್ನು ಮಾತ್ರ ನೇಮಕಾತಿ ಮಾಡುವುದರಿಂದ ಅಕ್ರಮ ತಡೆಯುವಲ್ಲಿ ಯಶಸ್ವಿಯಾಗುವುದು. ರಾಜ್ಯದ ಶೇ.43.3 ಲಕ್ಷ ನಿರುದ್ಯೋಗಿಗಳು ಇಂತಹ ತುರ್ತು ನಿರ್ಧಾರವನ್ನು ಎಡ ಸರ್ಕಾರದಿಂದ ನಿರೀಕ್ಷಿಸುತ್ತದೆ ಎಂದು ಉಮ್ಮನ್ ಚಾಂಡಿ ತಿಳಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries