HEALTH TIPS

ಸ್ವಪ್ನಾ ಮತ್ತು ರಮೀಜ್ ಆಸ್ಪತ್ರೆಯಿಂದ ಬಿಡುಗಡೆ- ಇಬ್ಬರಿಗೂ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲ-ವೈದ್ಯ ತಂಡ

  

        ಕೊಚ್ಚಿ: ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದ ಅಕ್ರಮ ಚಿನ್ನ ಸಾಗಾಣೆ ಪ್ರಕರಣದ ಆರೋಪಿಗಳಾದ ಸಪ್ನಾ ಸುರೇಶ್ ಮತ್ತು ರಮೀಜ್ ಅವರನ್ನು ನಿನ್ನೆ ಆಸ್ಪತ್ರೆಯಿಂದ ಮುಕ್ತಗೊಳಿಸಲಾಗಿದೆ.  ಇಬ್ಬರಿಗೂ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲ ಎಂದು ವೈದ್ಯಕೀಯ ಮಂಡಳಿ ತಿಳಿಸಿದೆ.

     ಇಬ್ಬರನ್ನೂ ವಿಯೂರ್ ಜೈಲಿಗೆ ಕಳುಹಿಸಲಾಯಿತು. ಸ್ವಪ್ನಳ ಪತಿ ಹಾಗೂ ಮಕ್ಕಳು ಭೇಟಿಗೆ ಆಗಮಿಸಿದ್ದರೂ ಅವಕಾಶ ನಿರಾಕರಿಸಲಾಯಿತು. ಹೊಟ್ಟೆ ನೋವಿನಿಂದ ರಾಮಿಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎದೆನೋವಿನ ಕಾರಣ ಸ್ವಪ್ನ ಚಿಕಿತ್ಸೆಗೆ ದಾಖಲಾಗಿದ್ದರು. 

        ಏತನ್ಮಧ್ಯೆ, ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಸೇರಿದಂತೆ ಆರೋಪಿಗಳು ನಾಶಪಡಿಸಿದ ಡಿಜಿಟಲ್ ಸಾಕ್ಷ್ಯವನ್ನು ತನಿಖಾ ಸಂಸ್ಥೆ ವಶಪಡಿಸಿಕೊಂಡಿದೆ ಎಂದು ಎನ್.ಐ.ಎ ತಿಳಿಸಿದೆ. ಫೆÇೀನ್ ಮತ್ತು ಲ್ಯಾಪ್ ಟಾಪ್‍ನಿಂದ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಸಂಭಾಷಣೆ ಸೇರಿದಂತೆ 2000 ಜಿಬಿ ಸಾಕ್ಷ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಸಾಕ್ಷ್ಯಗಳ ಆಧಾರದ ಮೇಲೆ ಎನ್.ಐ.ಎ ಸಂದೀಪ್ ನಾಯರ್ ಮತ್ತು ಇತರರನ್ನು ಪ್ರಶ್ನಿಸಲು ಪ್ರಾರಂಭಿಸಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries