HEALTH TIPS

ಕೇರಳಕ್ಕೆ ಮೂರು ವಿಶೇಷ ರೈಲುಗಳು; ಹೊಸ ಮಾರ್ಗಗಳು, ಅಕ್ಟೋಬರ್‍ನಿಂದ ಸೇವೆ ಆರಂಭ

    

       ತಿರುವನಂತಪುರ: ಕೇರಳ ಮತ್ತು ತಮಿಳುನಾಡು ನಡುವೆ ದಕ್ಷಿಣ ರೈಲ್ವೆ ಅಂತರರಾಜ್ಯ ಸೇವೆಯನ್ನು ಪ್ರಕಟಿಸಿದೆ. ಮೂರು ವಿಶೇಷ ರೈಲುಗಳಿಗೆ ಅನುಮತಿ ನೀಡಲಾಗಿದೆ. ಚೆನ್ನೈ - ಎಗ್ಮೋರ್ - ಕೊಲ್ಲಂ ಅನಂತಪುರಿ ಎಕ್ಸ್‍ಪ್ರೆಸ್, ಎರ್ನಾಕುಲಂ - ಕಾರೈಕಲ್ ಎಕ್ಸ್‍ಪ್ರೆಸ್ ಮತ್ತು ಚೆನ್ನೈ - ಅಲೆಪ್ಪಿ ಎಕ್ಸ್‍ಪ್ರೆಸ್ ಹೊಸದಾಗಿ ಘೋಷಿಸಲಾದ ಸೇವೆಗಳಾಗಿವೆ.

       ಅಕ್ಟೋಬರ್ ಆರಂಭದಿಂದ ಘೋಷಿತ ಸೇವೆಗಳು ಲಭ್ಯವಿರುತ್ತವೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಅನಂತಪುರಿ ಸ್ಪೆಷಲ್ ಅಕ್ಟೋಬರ್ 3 ರಂದು ಮತ್ತು ಅಕ್ಟೋಬರ್ 4 ರಂದು ಕೊಲ್ಲಂನಿಂದ ಸೇವೆ ಪ್ರಾರಂಭಿಸಲಿದೆ. ಚೆನ್ನೈ-ಅಲೆಪ್ಪಿ ಎಕ್ಸ್‍ಪ್ರೆಸ್ ಸ್ಪೆಷಲ್ ಚೆನ್ನೈನಿಂದ ನಾಳೆ ಮತ್ತು ಆಲಪ್ಪುಳದಿಂದ ಮೂರಕ್ಕೆ ಸೇವೆಗಳನ್ನು ಪ್ರಾರಂಭಿಸುತ್ತದೆ.

     ಎರ್ನಾಕುಳಂ-ಕಾರೈಕಲ್ ಸ್ಪೆಷಲ್ ಮಧ್ಯಾಹ್ನ 3 ಗಂಟೆಗೆ ಎರ್ನಾಕುಳಂ ಮತ್ತು 4 ಗಂಟೆಗೆ ಕಾರೈಕಲ್ ನಿಂದ ಹೊರಡಲಿದೆ ರೈಲು ರಾತ್ರಿ 10.30 ಕ್ಕೆ ಎರ್ನಾಕುಳನಿಂದ ಹೊರಡಲಿದೆ. ಟಿಕೇಟು ಕಾಯ್ದಿರಿಸಿದವರು ಮಾತ್ರ ಪ್ರಯಾಣಿಸಬಹುದು. ರೈಲು ಹೊರಡುವ 90 ನಿಮಿಷಗಳ ಮೊದಲು ನಿಲ್ದಾಣಗಳಿಗೆ ಆಗಮಿಸಲು ಸೂಚಿಸಲಾಗಿದೆ. ದಕ್ಷಿಣ ರೈಲ್ವೆ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries