HEALTH TIPS

ರಾಜ್ಯದಲ್ಲಿ ಇಂದು 6049 ಮಂದಿಗೆ ಕೋವಿಡ್-ಸಂಪರ್ಕದ ಮೂಲಕ 5306 ಜನರಿಗೆ ಸೋಂಕು-ಕಾಸರಗೋಡು-72 ಮಂದಿಗೆ ಕೊರೊನಾ ದೃಢ

               

       ತಿರುವನಂತಪುರಂ: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವುದರಲ್ಲಿ ಆತಂಕ ಮೂಡಿಸುತ್ತಿದ್ದು, ಏರಿಕೆಯ ಮಟ್ಟ ಕಳವಳಕ್ಕೆ ಕಾರಣವಾಗುತ್ತಿದೆ ಇಂದು 6049 ಜನರಿಗೆ ಕೋವಿಡ್ -19 ಖಚಿತವಾಗಿದೆ. ಕೊಟ್ಟಾಯಂ 760, ತ್ರಿಶೂರ್ 747, ಎರ್ನಾಕುಳಂ 686, ಕೋಝಿಕ್ಕೋಡ್ 598, ಮಲಪ್ಪುರಂ 565, ಪತ್ತನಂತಿಟ್ಟು 546, ಕೊಲ್ಲಂ 498, ತಿರುವನಂತಪುರಂ 333, ಆಲಪ್ಪುಳ 329, ಪಾಲಕ್ಕಾಡ್ 303, ಕಣ್ಣೂರು 302, ವಯನಾಡ್ 202, ಇಡುಕ್ಕಿ 108, ಕಾಸರಗೋಡು 72 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

     ಕಳೆದ 24 ಗಂಟೆಗಳಲ್ಲಿ 64,829 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.9.33 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್‍ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 74,47,052 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.

     ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 27 ಮಂದಿ ಸಾವನ್ನಪ್ಪಿದ್ದಾರೆ. ತಿರುವನಂತಪುರ ಅಟ್ಟಿಂಗಲ್‍ನ ಶಿವಾನಂದನ್ (64), ಪಯ್ಯೋಟ್ ನ ಲಿಲ್ಲಿ (63), ಕಡಕ್ಕಾವೂರಿನ ರಾಧಾಮಣಿ (58), ಕೊಲ್ಲಂ ಕುಳವಾಟಂನ ನಫಿಸಾ ಬೀವಿ (64), ಕಿಲಕ್ಕನೆಲಾದ ರಾಧಾಮಣಿ (58), ಪತ್ತನಂತಿಟ್ಟಿನ ಚೆಲ್ಲಮ್ಮ(84), ಆಲಪ್ಪುಳ ಅರೂರ್ ನ ಕೆ.ಆರ್.ವೇಣುನಾಥನ್ ಪಿಳ್ಳೆ(76), ಅಂಬಲಪ್ಪುಳದ ಶಾಂತಮ್ಮ (68), ಚೇರ್ತಲದ ಥಾಮಸ್ (75), ಎರ್ನಾಕುಳಂ ತಿರುವನಕುಳಂನ ಶಾರದಾ ವಾಸು (68), ತೋಪಂಪಡಿಯ ಸೆಸಿಲಿ ಜೋಸೆಫ್ (73), ತೃಕರಿಯೂರಿನ ಭಾಸ್ಕರನ್ ನಾಯರ್ (85), ತೃಶೂರ್ ಕೋಟ್ಟಪುರಂನ ಅನ್ನಿ(80), ಪಾಲಕ್ಕಾಡ್ ಕೂಡಲ್ಲೂರಿನ ಹಮ್ಸಾ (65), ಮಲಪ್ಪುರಂ ತಿರುರುಕಾಡುನ ಆಯಿಷಾ(75), ತೈಯ್ಯತ್ತುವಟ್ಟಂನ ಬಾಲಕೃಷ್ಣನ್ (57), ಪಾಂಡಿಕಾಡ್‍ನ ಖದೀಜಾ (53), ವಾಲಂಚೇರಿಯ ಕುಂಞÂ ಮುಹಮ್ಮದ್ (90), ನಾಟುವತ್ತ್ ನ ಆಲವಿಕುಟ್ಟಿ(75), ವಂಡೂರಿನ ಆಯಿಷಾಬಿ(55), ಆನಕ್ಕಯಂನ ನಿರ್ಮಲ(49), ಓಮನೂರ್ ನ ಮುಹಮ್ಮದ್ ಕುಟ್ಟಿ(64), ವಯನಾಡ್ ನ ವೈತಿರಿಯ ನಫೀಸಾ(80), ಮೇಪ್ಪಟ್ಟಿಯ ಸೈದಲವಿ(64), ಬತ್ತೇರಿಯ ಆಮಿನಾ(68), ಕಣ್ಣೂರು ಆರಳಂ ನ ಕರುಣಾಕರನ್(92) ಅರವೇಂಬಲ್ ನ ಸೈನಬ(72) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಈ ಮೂಲಕ ಕೋವಿಡ್ ಬಾಧಿಸಿ ಈವರೆಗೆ 2,870 ಮಂದಿ ಸಾವನ್ನಪ್ಪಿದ್ದಾರೆ. 

      ಇಂದು, ಸೋಂಕು ಪತ್ತೆಯಾದವರಲ್ಲಿ 108 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 5306 ಜನರಿಗೆ ಸೋಂಕು ತಗುಲಿತು. 575 ಗಾಗಿ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೊಟ್ಟಾಯಂ 729, ತ್ರಿಶೂರ್ 720, ಎರ್ನಾಕುಳಂ 504, ಕೋಝಿಕ್ಕೋಡ್  574, ಮಲಪ್ಪುರಂ 541, ಪತ್ತನಂತಿಟ್ಟು 449, ಕೊಲ್ಲಂ 490, ತಿರುವನಂತಪುರ 244, ಆಲಪ್ಪುಳ 315, ಪಾಲಕ್ಕಾಡ್ 141, ಕಣ್ಣೂರು 249, ವಯನಾಡ್ 193, ಇಡುಕ್ಕಿ 91, ಕಾಸರಗೋಡು 66 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. 

      ಇಂದು 60 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.  ತ್ರಿಶೂರ್ 12, ತಿರುವನಂತಪುರ 9, ಕಣ್ಣೂರು 8, ಕೊಟ್ಟಾಯಂ, ಪಾಲಕ್ಕಾಡ್ 7, ಎರ್ನಾಕುಳಂ 6, ಕೊಲ್ಲಂ 5, ಕೋಝಿಕ್ಕೋಡ್, ವಯನಾಡ್ ಮತ್ತು ಕಾಸರಗೋಡು 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

     ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5057 ಮಂದಿಯ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 320, ಕೊಲ್ಲಂ 279, ಪತ್ತನಂತಿಟ್ಟು 251, ಆಲಪ್ಪುಳ 212, ಕೊಟ್ಟಾಯಂ 474, ಇಡುಕ್ಕಿ 417, ಎರ್ನಾಕುಳಂ 414, ತ್ರಿಶೂರ್ 606, ಪಾಲಕ್ಕಾಡ್ 265, ಮಲಪ್ಪುರಂ 709, ಕೋಝಿಕ್ಕೋಡ್ 510, ವಯನಾಡ್ 195, ಕಣ್ಣೂರು 306, ಕಾಸರಗೋಡು 99 ಮಂದಿಗಳಿಗೆ ನೆಗೆಟಿವ್ ಆಗಿದೆ. ಇದರೊಂದಿಗೆ 61,468 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 6,50,836 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

     ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,79,711 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,66,178 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 13,533 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1441 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

     ಇಂದು 4 ಹೊಸ ಹಾಟ್‍ಸ್ಪಾಟ್‍ಗಳಿವೆ. ಹೊಸ ಹಾಟ್‍ಸ್ಪಾಟ್‍ಗಳೆಂದರೆ ಕೊಟ್ಟಾಯಂ ಜಿಲ್ಲೆಯ ಕಡನಾಡ್ (ಕಂಟೋನ್ಮೆಂಟ್ ವಲಯ ವಾರ್ಡ್ 10), ರಾಮಪುರಂ (7, 8), ಕಾಸರಗೋಡು ಜಿಲ್ಲೆಯ ದೇಲಂಪಾಡಿ (11) ಮತ್ತು ತ್ರಿಶೂರ್ ಜಿಲ್ಲೆಯ ಪರಿಯಾರಂ (12). ಇಂದು 3 ಪ್ರದೇಶಗಳನ್ನು  ಹಾಟ್‍ಸ್ಪಾಟ್‍ಗಳಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 458 ಹಾಟ್‍ಸ್ಪಾಟ್‍ಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries