HEALTH TIPS

ಸಿ.ಎಂ. ರವೀಂದ್ರನ್ ರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ-ಇ.ಡಿ ಬಂಧನವನ್ನು ತಡೆಹಿಡಿಯಲಾಗದು-ಕಠಿಣ ನಿಲುವು

        

         ಕೊಚ್ಚಿ: ಜಾರಿ ನಿರ್ದೇಶನಾಲಯವು ವಶಕ್ಕೆ ತೆಗೆದುಕೊಳ್ಳದಂತೆ ತಡೆಯಾಜ್ಞೆ ನೀಡಲು ಕೋರಿ ಮುಖ್ಯಮಂತ್ರಿಯ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿಎಂ ರವೀಂದ್ರನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

       ಅರ್ಜಿಯಲ್ಲಿ ಮುಖ್ಯವಾಗಿ ಕೊಚ್ಚಿಗೆ ವಿಚಾರಣೆಗೆ ಬರಲು ನೋಟಿಸ್ ನೀಡುವುದನ್ನು ತಡೆಹಿಡಿಯಬೇಕು. ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಕಾರಣ ದೀರ್ಘಕಾಲದವರೆಗೆ ನಿರಂತರ ವಿಚಾರಣೆ ಹಾಜರಾಗಲು ಸಾಧ್ಯವಿಲ್ಲ ಎಂದು ಕೇಳಲಾಯಿತು.

       ಪ್ರಶ್ನಿಸಲು ವಕೀಲರಿಗೆ ಅವಕಾಶ ನೀಡುವ ಮನವಿಯನ್ನು ನ್ಯಾಯಾಲಯ ಸ್ವೀಕರಿಸಲಿಲ್ಲ. ನೋಟಿಸ್ ನ್ನು ತಡೆಹಿಡಿಯಲು ಫಿರ್ಯಾದಿಗೆ ಯಾವುದೇ ಹಕ್ಕಿಲ್ಲ ಎಂದು ಇಡಿ ವಾದಿಸಿತು.

      ಹಲವಾರು ನೋಟಿಸ್‍ಗಳನ್ನು ಕಳುಹಿಸಿದ ಬಳಿಕ ರವೀಂದ್ರನ್ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಇಡಿಯ ವಾದದ ಆಧಾರದ ಮೇಲೆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries