HEALTH TIPS

ರೋಟರಿ ಇಂಟರ್ ನ್ಯಾಶನಲ್‍ನಿಂದ ಗೌರವಾರ್ಪಣೆ

      ಕಾಸರಗೋಡು: ಜಿಲ್ಲೆಯ ವಿವಿಧ ವಲಯಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವವರಿಗೆ ರೋಟರಿ ಇಂಟರ್‍ನ್ಯಾಶನಲ್ ವತಿಯಿಂದ ವೊಕೇಶನಲ್ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಲಾಯಿತು. ಕಾಸರಗೋಡು ಸಿಟಿ ಟವರ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಕುಮಾರ್ ಕಾಸರಗೋಡು, ಕುಂಬಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಅರೋಗ್ ಮೇಲ್ವಿಚಾರಕ ಬಿ. ಅಶ್ರಫ್, ಅಡ್ಕತ್ತಬೈಲ್ ಸರ್ಕಾರಿ ಹಿರಿಯಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೆ.ಎ ಯಶೋಧಾ, ಜನಮೈತ್ರಿ ಪೊಲೀಸ್ ಬೀಟ್ ಆಫೀಸರ್‍ಗಳಾದ ಮಧು, ಎಚ್.ಆರ್ ಪ್ರವೀಣ್, ಪೇಪರ್ ಬ್ಯಾಗ್ ತಯಾರಿ ಸಂಸ್ಥೆಯ ಎಂ. ಬಿಂದ್ಯಾ ಅವರನ್ನು ಗೌರವಿಸಲಾಯಿತು.

       ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ಪಿ.ಎಂ ಮುನೀರ್ ಸಮಾರಂಭ ಉದ್ಘಾಟಿಸಿದರು. ರೋಟರಿ ಅಧ್ಯಕ್ಷ ಡಾ. ಜನಾರ್ದನ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.  ರೋಟರಿ ಜಿಲ್ಲಾ ಕಾರ್ಯದರ್ಶಿ ಎಂ.ಟಿ ದಿನೇಶನ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries