HEALTH TIPS

ಕೋವಿಡ್ ದತ್ತಾಂಶ ವಿಶ್ಲೇಷಣೆಗಾಗಿ ಸ್ಪ್ರಿಂಕ್ಲರ್ ಕಂಪನಿಯನ್ನು ಸೇರ್ಪಡೆಗೊಳಿಸುವುದು ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಯ ಅನುಮತಿ ಇಲ್ಲದೆ-ನಿರ್ಧಾರಗಳ ಹಿಂದೆ ಶಿವಶಂಕರ್-ತಜ್ಞ ಸಮಿತಿ ವರದಿ

               

          ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಐಟಿ ಇಲಾಖೆಯ ಉಸ್ತುವಾರಿ ಅಥವಾ ಅಂದಿನ ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ಅವರ ಅರಿವಿಲ್ಲದೆ ಸ್ಪ್ರಿಂಕ್ಲರ್ ಕಂಪನಿಯನ್ನು ಕೋವಿಡ್ ಮಾಹಿತಿಯ ವಿಶ್ಲೇಷಣೆಯಲ್ಲಿ ಸೇರಿಸಲಾಗಿದೆ ಎಂದು ವರದಿಯಾಗಿದೆ. ಎಲ್ಲವನ್ನೂ ಐಟಿ ಕಾರ್ಯದರ್ಶಿ ಎಂ.ಶಿವಶಂಕರ್ ನಿರ್ಧರಿಸಿದ್ದಾರೆ. ಮಾಧವನ್ ನಂಬಿಯಾರ್ ಅಧ್ಯಕ್ಷತೆಯ ಆಯೋಗದ ವರದಿಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಶಿವಶಂಕರ್ ಬಗ್ಗೆ ವರದಿಯಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. 

          ಮಾತುಕತೆಗಳಿಲ್ಲದೆ ಒಪ್ಪಂದಗಳನ್ನು ಮಾಡುವ ಮೂಲಕ ಸಾರ್ವಜನಿಕ ಮಾಹಿತಿಯ ಮೇಲೆ ಸ್ಪ್ರಿಂಕ್ಲರ್‍ಗೆ ಸಂಪೂರ್ಣ ಹಕ್ಕುಗಳನ್ನು ನೀಡಲಾಗಿದೆ ಎಂದು ವರದಿ ಬೊಟ್ಟುಮಾಡಿದೆ. ಗುತ್ತಿಗೆ ಕಾರ್ಯನಿರ್ವಾಹಕರಿಗೆ ಸಾಕಷ್ಟು ತಾಂತ್ರಿಕ ಮತ್ತು ಕಾನೂನು ಪರಿಣತಿ ಇರಲಿಲ್ಲ. ಒಪ್ಪಂದದ ನಿಯಮಗಳು ದುರುಪಯೋಗಗೊಂಡಿರುವುದು ಕಂಡುಬಂದಿದೆ. 

          ಸ್ಪ್ರಿಂಕ್ಲರ್ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟಕರವಾಗಿದೆ. ಏಕೆಂದರೆ ಅದು ಯು.ಎಸ್. ನ್ಯಾಯಾಲಯದ ವ್ಯಾಪ್ತಿಯಲ್ಲಿದೆ. ವೇದಿಕೆಯ ಸಾಮಥ್ರ್ಯ ಮತ್ತು ಸುರಕ್ಷತೆಯನ್ನು ಪರಿಶೀಲಿಸಲಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮಾಜಿ ವಾಯುಯಾನ ಕಾರ್ಯದರ್ಶಿ ಎಂ ಮಾಧವನ್ ನಂಬಿಯಾರ್ ಮತ್ತು ಸೈಬರ್ ಭದ್ರತಾ ತಜ್ಞ ಡಾ.ಗುಲ್ಶನ್ ರಾಯ್  ಅವರನ್ನು ಒಳಗೊಂಡ ಸಮಿತಿಯನ್ನು ಈ ನಿಟ್ಟಿನ ಒಪ್ಪಂದಕ್ಕೆ ಸಂಬಂಧಿಸಿದ ಆರೋಪಗಳನ್ನು ಪರಿಶೀಲಿಸಲು ಸರ್ಕಾರ ನೇಮಿಸಿದೆ.

          ರಕ್ಷಣಾ ವಿಷಯಗಳು ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ. ಮತ್ತು ಐಟಿ ಇಲಾಖೆ ಮಾತ್ರ ಸಹಾಯಕರಾಗಿರಬೇಕು ಎಂದು ಕೋವಿಡ್ ನಿಯಮಗಳ ಕಡತದಲ್ಲಿ ಬರೆಯಲಾಗಿದೆ ಎಂದು ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ರಾಜನ್ ಖೋಬ್ರಗಡೆ ಸಮಿತಿಗೆ ತಿಳಿಸಿದ್ದಾರೆ. ಸ್ಪ್ರಿಂಕ್ಲರ್ ಕಂಪೆನಿಯ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿಲ್ಲ ಎಂದು ಖೋಬ್ರಗಡೆ ಆಯೋಗಕ್ಕೆ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries