ತಿರುವನಂತಪುರ: ಇತಿಹಾಸ ಪ್ರಸಿದ್ದ ಅಟ್ಟುಂಕಾಲ್ ಪೊಂಗಲ ಉತ್ಸವ ಇಂದು ನಡೆಯಲಿದೆ. ಅನಂತಪುರಿ ಮತ್ತು ದೇವಾಲಯದ ಮೈದಾನವು ಪೊಂಗಲಾಕ್ಕೆ ಸಿದ್ಧವಾಗಿದೆ. ಕೊರೋನದ ಹಿನ್ನೆಲೆಯಲ್ಲಿ ಈ ವರ್ಷದ ಸಮಾರಂಭಗಳನ್ನು ಕಟ್ಟುನಿಟ್ಟಿನ ನಿಯಂತ್ರಣದಲ್ಲಿ ನಡೆಸಲಾಗುವುದು. ಭಂಡಾರ ಒಲೆಯಲ್ಲಿ ಅಗ್ನಿ ಪ್ರಜ್ವಲನೆಯೊಂದಿಗೆ ಪೊಂಗಲಾ ಇಂದು ಬೆಳಿಗ್ಗೆ 10.50 ಕ್ಕೆ ಪ್ರಾರಂಭವಾಗಲಿದೆ.
ಅಟ್ಟುಂಕಾಲ್ ಪೊಂಗಲ ತಯಾರಿಗಾಗಿ ಅಂತಿಮ ಹಂತದಲ್ಲಿದೆ. ಪೊಂಗಲಾ ಸಮರ್ಪಣೆ ಕಟ್ಟುನಿಟ್ಟಿನ ನಿಯಂತ್ರಣದಲ್ಲಿರಲಿದೆ. ಎಲ್ಲಾ ಗೌಜಿ ಗದ್ದಲಗಳಿಗೆ ನಿಯಂತ್ರಣ ಹೇರಲಾಗಿದೆ. ಈ ವರ್ಷ ಪೊಂಗಲಾ ಕೊರೋನದ ಹಿನ್ನೆಲೆಯಲ್ಲಿ ಭಂಡಾರ ಒಲೆಯಲ್ಲಿ ಮಾತ್ರ ನಡೆಯಲಿದೆ. ಬೆಳಿಗ್ಗೆ 10.20 ಕ್ಕೆ ಪವಿತ್ರ ಮೆರವಣಿಗೆಯ ಬಳಿಕ ಬೆಳಿಗ್ಗೆ 10.50 ಕ್ಕೆ ಭಂಡಾರ ಒಲೆಗೆ ಅಗ್ನಿ ಪ್ರಜ್ವಲನೆ ಮಾಡಲಾಗುವುದು. ಇತಿಹಾಸದಲ್ಲಿ ತಿಳಿಸಿರುವಂತೆ ಪಾಂಡ್ಯ ರಾಜನ ಹತ್ಯೆಯ ಬಗೆಗಿನ ಭಾಗವನ್ನು ಹಾಡುವ ಮೂಲಕ ಪೊಂಗಲ ಸಮಾರಂಭಗಳು ದೇವಾಲಯದಲ್ಲಿ ಪ್ರಾರಂಭವಾಗುತ್ತವೆ.
ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಎಲ್ಲಾ ಭಕ್ತರು ಮನೆಯಲ್ಲಿ ಪೊಂಗಲವನ್ನು ತಯಾರಿಸಲು ಸೂಚಿಸಲಾಗಿದೆ. ದೇವಾಲಯದ ಭೇಟಿಯು ಕೊರೋನಾ ಮಾನದಂಡಗಳನ್ನು ಅನುಸರಿಸಿರುತ್ತದೆ. 10 ರಿಂದ 12 ವರ್ಷದೊಳಗಿನ ಬಾಲಕಿಯರಿಗೆ ಮಾತ್ರ ತಲಪೋಲಿಯಲ್ಲಿ ಭಾಗವಹಿಸಲು ಅವಕಾಶವಿದೆ. ಪೊಂಗಲದ ಬಳಿಕ ಸಂಜೆ 7.30 ಕ್ಕೆ ಸಾಂಪ್ರದಾಯಿಕ ಮೆರವಣಿಗೆ ನಡೆಯಲಿದೆ. ಮೆರವಣಿಗೆ ರಾತ್ರಿ 11 ಗಂಟೆಗೆ ದೇವಸ್ಥಾನಕ್ಕೆ ಮರಳಲಿದೆ.
ಪೊಂಗಲ ಉತ್ಸವವು ಭಾನುವಾರ ಕುರುದಿ ತರ್ಪಣಂನೊಂದಿಗೆ ಮುಕ್ತಾಯಗೊಳ್ಳುವುದು. ಪೋಲೀಸ್, ಅಗ್ನಿಶಾಮಕ ದಳ ಮತ್ತು ಇತರರ ಸೇವೆಗಳು ದೇವಾಲಯದಲ್ಲಿ ಲಭ್ಯವಿದೆ. ಹಬ್ಬದ ಎಂಟನೇ ದಿನದಂದು ಅನೇಕ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.