HEALTH TIPS

ಪಾಪ್ಯುಲರ್ ಫ್ರಂಟ್‍ನ ಮಾಹಿತಿ ಸಂಗ್ರಹಿಸಲು ಯುಪಿ ಪೋಲೀಸರು ಕೇರಳಕ್ಕೆ

  

        ಪತ್ತನಂತಿಟ್ಟು: ಕೇರಳ ಮೂಲದ ಪೋಪ್ಯಲರ್ ಫ್ರಂಟ್ ಭಯೋತ್ಪಾದಕ ಪಂದಲಂ ಚೆರಿಯಕ್ಕಲ್ ನೇಸಿಮಾ ಮಂಜಿಲ್ ನ ಅನ್ಷಾದ್ ಬಾದರುದ್ದೀನ್ ಬಗ್ಗೆ ಮಾಹಿತಿ ಸಂಗ್ರಹಿಸಲು ಉತ್ತರ ಪ್ರದೇಶದ ಪೋಲೀಸರು ಶುಕ್ರವಾರ ಪಂದಲಂಗೆ ಆಗಮಿಸಿರುವರು. ತನಿಖಾ ತಂಡವು ಚೆರಿಯಕಲ್‍ನಲ್ಲಿರುವ ಕುಟುಂಬದ ಮನೆಗೆ ತಲುಪಿ ಸಂಬಂಧಿಕರೊಂದಿಗೆ ಅರ್ಧ ಘಂಟೆ ಮಾತನಾಡಿದೆ ಎಂದು ತಿಳಿದುಬಂದಿದೆ. ಪಂದಲಂ ಪೋಲೀಸ್ ಠಾಣೆಗೆ ತೆರಳಿ ಅನ್ಷಾದ್ ಅವರ ವಿವರಗಳನ್ನು ಪರಿಶೀಲಿಸಿದೆ. 


        ಗುರುವಾರ  ಸಂಜೆ 5.30 ಕ್ಕೆ ಉತ್ರಪ್ರದೇಶ ವಿಶೇಷ ಪೋಲೀಸ್ ಪಡೆಯ ಇಬ್ಬರು ಅಧಿಕಾರಿಗಳು ಆಗಮಿಸಿದ್ದರು. ಸೆಸಿಲ್ ಬ್ರಾಂಚ್ ಡಿವೈಎಸ್ಪಿ. ಎಂ.ಕೆ. ಜುಲ್ಫಿಕರ್, ವಿಶೇಷ ಶಾಖೆ ಎಸ್‍ಐ. ರೆಗಿ ಅಬ್ರಹಾಂ ಅವರು ಆಗಮಿಸಿದ್ದರು. ಪಂದಳಂನಲ್ಲಿ ತನಿಖೆ ಪೂರ್ಣಗೊಳಿಸಿದ ನಂತರ ಯುಪಿ ಪೋಲೀಸರು ಅನ್ಷಾದ್ ಅವರೊಂದಿಗೆ ನಿಕಟರಾಗಿದ್ದ ವಡಕರ ಮೂಲದ ಫಿರೋಜ್ ಖಾನ್ ಅವರ ಮನೆಗೆ ತೆರಳಿತು. 

       ಪಾಪ್ಯುಲರ್ ಫ್ರಂಟ್‍ನ ರಾಷ್ಟ್ರೀಯ ಸಂಘಟನಾ ಸಮಿತಿಯ ಉಸ್ತುವಾರಿ ವಹಿಸಿಕೊಂಡಿದ್ದ ಅನ್ಷಾದ್ ನನ್ನು ಉತ್ತರ ಪ್ರದೇಶದಲ್ಲಿ 16 ರಂದು ವಡಕಾರಾ ಮೂಲದ ಫಿರೋಜ್‍ಖಾನ್ ಜೊತೆಗೆ ಸ್ಫೋಟಕಗಳೊಂದಿಗೆ ಬಂಧಿಸಲಾಗಿತ್ತು. ಶಂಕಿತರಿಗೆ ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧವಿದೆ ಎಂದು ಯುಪಿ ಪೋಲೀಸರು ಪತ್ತೆಹಚ್ಚಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries