HEALTH TIPS

ಕೇರಳದಲ್ಲಿ ಬಾಂಬ್ ಸ್ಫೋಟ ನಡೆಸುವ ಬೆದರಿಕೆ; ಎನ್.ಐ.ಎ ಯಿಂದ ಆರೋಪಿಗಳ ತನಿಖೆ

         ಕೊಚ್ಚಿ: ಗಣರಾಜ್ಯೋತ್ಸವದಂದು ರಾಜ್ಯದ ವಿವಿಧ ಭಾಗಗಳಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಲಾಗುವುದು ಎಂದು ಬೆದರಿಕೆ ಸಂದೇಶ ಕಳುಹಿಸಿದ ಘಟನೆಯ ಬಗ್ಗೆ ಎನ್.ಐ.ಎ ತನಿಖೆ ನಡೆಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ತನಿಖಾ ತಂಡ ಆರೋಪಿಗಳಿಂದ  ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ. ವಿವಿಧ ಏಜೆನ್ಸಿಗಳು ತನಿಖೆ ನಡೆಸುತ್ತವೆ ಎಂದು ಹಿರಿಯ ಪೋಲೀಸ್ ಅಧಿಕಾರಿಗಳು ತಿಳಿಸಿದ್ದರು. ಇದರ ಬೆನ್ನಲ್ಲೇ ಎನ್.ಐ.ಎ ಆರೋಪಿಗಳ ಮಾಹಿತಿ ಸಂಗ್ರಹಿಸಿದೆ.

            ಈ ಪ್ರಕರಣದ ಆರೋಪಿಗಳು ದೆಹಲಿಯ ನಿಧಿನ್ ಎಲಿಯಾಸ್ ಖಾಲಿದ್ ಮತ್ತು ಹರಿಯಾಣ ಮೂಲದ ಹಕಮ್. ಅವರನ್ನು ಹರಿಯಾಣದಿಂದ ಬಂಧಿಸಿ ಬುಧವಾರ ರಾಜ್ಯಕ್ಕೆ ಕರೆತಂದು ಎನ್.ಐ.ಎ ಪ್ರಶ್ನಿಸಿದೆ. ಮುಂದಿನ ದಿನಗಳಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು ಎಂದು ತಿಳಿದುಬಂದಿದೆ. ಪೋಲೀಸ್ ಕಸ್ಟಡಿಯಲ್ಲಿ ಉಳಿದಿರುವ ಇಬ್ಬರನ್ನು ಭಯೋತ್ಪಾದನಾ ನಿಗ್ರಹ ದಳವೂ ಪ್ರಶ್ನಿಸಿದೆ.

          ಜನವರಿ 25 ರಂದು ಎರ್ನಾಕುಳಂ ನಾರ್ತ್ ಎಸ್.ಐ ಅನಸ್ ಅವರ ಮೊಬೈಲ್ ಪೋನ್ ಗೆ ಬಂದ ಕರೆಯಲ್ಲಿ ಬಾಂಬ್ ಸ್ಫೋಟಗೊಳ್ಳುವುದಾಗಿ ಬೆದರಿಕೆ ಸಂದೇಶ ನೀಡಲಾಗಿತ್ತು. ಬಳಿಕ ಪೋಲೀಸ್ ಆಯುಕ್ತರ ಸೂಚನೆಯ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಪೋನ್ ಆಧಾರಿತ ತನಿಖೆಯಲ್ಲಿ ಆರೋಪಿಗಳು ಹರಿಯಾಣದಲ್ಲಿದ್ದಾರೆ ಎಂದು ತಿಳಿದುಬಂದಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries