HEALTH TIPS

ರಾಜ್ಯದಲ್ಲಿ ಇಂದು 1970 ಮಂದಿಗೆ ಕೋವಿಡ್ ಪತ್ತೆ- ಕಾಸರಗೋಡು:78 ಮಂದಿಗೆ ಕೊರೊನಾ ಪತ್ತೆ

       ತಿರುವನಂತಪುರ: ರಾಜ್ಯದಲ್ಲಿ ಇಂದು 1970 ಜನರಿಗೆ ಕೋವಿಡ್ -19 ಖಚಿತವಾಗಿದೆ. ಎರ್ನಾಕುಳಂ 238, ಕೋಝಿಕೋಡ್ 237, ಕೊಟ್ಟಾಯಂ 217, ಕಣ್ಣೂರು 176, ತ್ರಿಶೂರ್ 166, ತಿರುವನಂತಪುರ 165, ಕೊಲ್ಲಂ 163, ಪತ್ತನಂತಿಟ್ಟು 126, ಆಲಪ್ಪುಳ 103, ಮಲಪ್ಪುರಂ 102, ಇಡುಕಿ 81, ಕಾಸರಗೋಡು 78, ಪಾಲಕ್ಕಾಡ್ 69, ವಯನಾಡ್ 49 ಎಂಬಂತೆ ಸೋಂಕು ಬಾಧಿಸಿದೆ.

        ಕಳೆದ 24 ಗಂಟೆಗಳಲ್ಲಿ, ದಕ್ಷಿಣ ಆಫ್ರಿಕಾದೊಂದ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢ ಪಟ್ಟಿದೆ.  ಯುಕೆ (99), ದಕ್ಷಿಣ ಆಫ್ರಿಕಾ (4) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 104 ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದ್ದು, ಈ ಪೈಕಿ 91 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 11 ಜನರಿಗೆ  ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ. 
       ಕಳೆದ 24 ಗಂಟೆಗಳಲ್ಲಿ 60,974 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.3.23 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎನ್ಎಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಆಂಟಿಜೆನ್ ಪರೀಕ್ಷೆ ಸೇರಿದಂತೆ ಒಟ್ಟು 1,23,90,578 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
       ಕಳೆದ 24 ಗಂಟೆಗಳಲ್ಲಿ  15 ಮಂದಿ ಸೋಂಕು ಬಾಧಿಸಿ ಮೃತಪಟ್ಟಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 4422 ಕ್ಕೆ ಏರಿಕೆಯಾಗಿದೆ. 
        ಇಂದು,  ಸೋಂಕು ದೃಢಪಟ್ಟವರಲ್ಲಿ 70 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 1742 ಜನರಿಗೆ ಸೋಂಕು ತಗಲಿತು. 145 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಲಂ 229, ಕೋಝಿಕೋಡ್ 231, ಕೊಟ್ಟಾಯಂ 199, ಕಣ್ಣೂರು 137, ತ್ರಿಶೂರ್ 164, ತಿರುವನಂತಪುರ 102, ಕೊಲ್ಲಂ 162, ಪತ್ತನಂತಿಟ್ಟು 107, ಆಲಪ್ಪುಳ 101, ಮಲಪ್ಪುರಂ 96, ಇಡುಕಿ 76, ಕಾಸರ‌ಗೋಡು 67, ಪಾಲಕ್ಕಾಡ್ 25, ವಯನಾಡ್ 46 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
          ಹದಿಮೂರು ಮಂದಿ ಆರೋಗ್ಯ ಕಾರ್ಯಕರ್ತರು ಸೋಂಕಿಗೆ ಒಳಗಾಗಿದ್ದಾರೆ. ಕಣ್ಣೂರು 4, ತಿರುವನಂತಪುರ, ಎರ್ನಾಕುಳಂ, ಪಾಲಕ್ಕಾಡ್ ತಲಾ 2, ಪತ್ತನಂತಿಟ್ಟು, ವಯನಾಡ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ.
        ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2884 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 183, ಕೊಲ್ಲಂ 33, ಪತ್ತನಂತಿಟ್ಟು 141, ಆಲಪ್ಪುಳ 159, ಕೊಟ್ಟಾಯಂ 155, ಇಡಕ್ಕಿ 97, ಎರ್ನಾಕುಳಂ 752, ತ್ರಿಶೂರ್ 216, ಪಾಲಕ್ಕಾಡ್ 62, ಮಲಪ್ಪುರಂ 277, ಕೋಝಿಕೋಡ್ 365, ವಯನಾಡ್ 35, ಕಣ್ಣೂರು 319,ಕಾಸರಗೋಡು 90 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 26,127 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,63,444 ಮಂದಿ ಜನರನ್ನು ಕೋವಿಡ್‌ನಿಂದ ಮುಕ್ತಗೊಳಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,43,461 ಮಂದಿ  ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,39,309 ಮಂದಿ  ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 4,152 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 449 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. 
       ಇಂದು 3 ಹೊಸ ಹಾಟ್‌ಸ್ಪಾಟ್‌ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‌ಸ್ಪಾಟ್‌ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 355 ಹಾಟ್‌ಸ್ಪಾಟ್‌ಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries