HEALTH TIPS

ಅಭ್ಯರ್ಥಿ ನಿರ್ಣಯ; ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ತೀವ್ರ: ಚೇಲಕ್ಕರದಲ್ಲಿ ಪ್ರತಿಭಟನೆ ನಡೆಸಿದ 33 ಬೂತ್ ಅಧ್ಯಕ್ಷರಿಂದ ಸಾಮೂಹಿಕ ರಾಜೀನಾಮೆ

                         

        ತ್ರಿಶೂರ್: ಅಭ್ಯರ್ಥಿ ಆಯ್ಕೆಯ ಬಗ್ಗೆ ಕಾಂಗ್ರೆಸ್ ಒಳಗೆ ಭಿನ್ನಾಭಿಪ್ರಾಯಗಳು ತೀವ್ರಗೊಳ್ಳುತ್ತಿವೆ. ಚಾಲಕ್ಕುಡಿ ಮತ್ತು ಕೊಡುಂಗಲ್ಲೂರ್ ಗಳ ಬಳಿಕ, ಸಂಭವನೀಯ ಅಭ್ಯರ್ಥಿಗಳ ಪಟ್ಟಿಯ ವಿರುದ್ಧ ಚೇಲಕ್ಕರ ಮತ್ತು ಮನಲೂರಿನಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಚಾಲಕ್ಕುಡಿಯಲ್ಲಿ ನಾಮನಿರ್ದೇಶನವನ್ನು ವಿರೋಧಿಸಿ 33 ಬೂತ್ ಅಧ್ಯಕ್ಷರು ರಾಜೀನಾಮೆ ನೀಡಿದರು.


        ಚಾಲಕುಡಿಯಲ್ಲಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ಶಾನ್ ಪಾಲಿಸೇರಿಗಾಗಿ ಮತ್ತು ಸಿ.ಎಸ್.ಶ್ರೀನಿವಾಸನ್ ಗಾಗಿ ಕೊಡುಂಗಲ್ಲೂರಿನಲ್ಲಿ ಸ್ಥಳೀಯ ವ್ಯಕ್ತಿಗಳಿಗೆ ನೀಡಬೇಕೆಂಬ ಆಗ್ರಹ ತೀವ್ರಗೊಂಡಿದೆ. ಕಾರ್ಯಕರ್ತರು ನೇರವಾಗಿ ಬೀದಿಗಿಳಿದು ಪೋಸ್ಟರ್‍ಗಳನ್ನು ಅಂಟಿಸಿದ್ದು, ಬಳಿಕ ಬೂತ್ ಅಧ್ಯಕ್ಷರು ರಾಜೀನಾಮೆ ನೀಡಿದರು. ಚಾಲಕುಡಿಯಲ್ಲಿ, ಹೊರಗಿನವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಬಾರದು. ಕಾರ್ಯದರ್ಶಿ ಟಿ.ಜೆ.ಸನಿಶ್‍ಕುಮಾರ್ ಗೆಲ್ಲುವ ಸಾಧ್ಯತೆ ಇಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಚಾಲಕ್ಕರದಲ್ಲಿ, ಒಂಬತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ರಾಹುಲ್ ಗಾಂಧಿಗೆ ಪತ್ರವೊಂದನ್ನು ಸಲ್ಲಿಸಿದ್ದು, ಸಿ.ಸಿ.ಶ್ರೀಕುಮಾರ್ ಅವರನ್ನು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಿಂದ  ಬದಲಾಯಿಸಿ ಅವರ ಸ್ಥಾನಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ.ದಾಸ್ ಅವರನ್ನು ನಿಯೋಜಿಸುವಂತೆ ಕೋರಿದ್ದಾರೆ.

         ಮನಲೂರು ಕ್ಷೇತ್ರದಲ್ಲೂ ಸೇವ್ ಕಾಂಗ್ರೆಸ್ ಪೋರಂ ಹೆಸರಿನಲ್ಲಿ ಪೋಸ್ಟರ್‍ಗಳು ಕಾಣಿಸಿಕೊಂಡಿದ್ದು, ಆಮದು ಅಭ್ಯರ್ಥಿ ಇರಬಾರದು ಎಂದು ಒತ್ತಾಯಿಸಿದರು. ಕಾರ್ಯಕರ್ತರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಅಭ್ಯರ್ಥಿಯು ಕೊನೆಯ ನಿಮಿಷದ ಚಟುವಟಿಕೆಗಳ ಮೂಲಕ ಪರಿಸ್ಥಿತಿ ಭಿನ್ನವಾಗಲಿದೆ ಎಂಬ ಎಚ್ಚರಿಕೆ ನೀಡಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries