HEALTH TIPS

ಮೂವರಿಂದ ನಾಮಪತ್ರಿಕೆ ಹಿಂತೆಗೆತ: ಕಾಸರಗೋಡು ಜಿಲ್ಲೆಯಲ್ಲಿ ರಂಗದಲ್ಲಿರುವ 38 ಅಭ್ಯರ್ಥಿಗಳು

       ಕಾಸರಗೋಡು: ವಿದಾನಸಭೆ ಚುನಾವಣೆ ಸಂಬಂಧ ನಾಮಪತ್ರಿಕೆ ಹಿಂತೆಗೆತದ ಕೊನೆಯ ದಿನಾಂಕ ಸೋಮವಾರವಾಗಿದ್ದು, ಮೂವರು ತಮ್ಮ ನಾಮಪತ್ರಿಕೆ ಹಿಂತೆಗೆದುಕೊಂಡಿದ್ದಾರೆ.  ಈ ಮೂಲಕ ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 38 ಮಂದಿ ಅಭ್ಯರ್ಥಿಗಳು ರಂಗದಲ್ಲಿದ್ದಾರೆ. 


          ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಬಿ.ಎಸ್.ಪಿ. ಅಭ್ಯರ್ಥಿಯಾಗಿ ನಾಮಪತ್ರಿಕೆ ಸಲ್ಲಿಸಿದ್ದ ಸುಂದರ, ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಯಾಗಿ ನಾಮಪತ್ರಿಕೆ ಸಲ್ಲಿಸಿದ್ದ ಅಬ್ದುಲ್ ಅಝೀಝ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರಿಕೆ ಸಲ್ಲಿಸಿದ್ದ ಚಂದ್ರನ್ ಎ.ಕೆ. ತಮ್ಮ ನಾಮಪತ್ರಿಕೆ ಹಿಂತೆಗೆದುಕೊಂಡಿದ್ದಾರೆ. 

         ಈ ಮೂಲಕ ಮಂಜೇಶ್ವರದಲ್ಲಿ 6, ಕಾಸರಗೋಡಿನಲ್ಲಿ 7, ಉದುಮಾದಲ್ಲಿ 6, ಕಾಞಂಗಾಡಿನಲ್ಲಿ 11, ತ್ರಿಕರಿಪುರದಲ್ಲಿ 8 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

       ಮಂಜೇಶ್ವರ ವಿದಾನಸಭೆ ಕ್ಷೇತ್ರದ ಅಭ್ಯರ್ಥಿಗಳು: ವಿ.ವಿ.ರಮೇಶನ್(ಸಿ.ಪಿ.ಎಂ.),  ಕೆ.ಸುರೇಂದ್ರನ್(ಬಿ.ಜೆ.ಪಿ.), ಎ.ಕೆ.ಎಂ.ಅಶ್ರಫ್(ಲೀಗ್), ಪ್ರವೀಣ್ ಕುಮಾರ್(ಅಣ್ಣಾ ಡೆಮೊಕ್ರೆಟಿಕ್ ಹ್ಯೂಮನ್ ರೈಟ್ಸ್ ಪಾರ್ಟಿ ಆಫ್ ಇಂಡಿಯಾ), ಜಾನ್ ಡಿಸೋಜಾ(ಸ್ವತಂತ್ರ), ಸುರೇಂದ್ರನ್ ಎಂ(ಸ್ವತಂತ್ರ) ರಂಗದಲ್ಲಿದ್ದಾರೆ. 

       ಕಾಸರಗೋಡು ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳು: ಎನ್.ಎ.ನೆಲ್ಲಿಕುನ್ನು(ಲೀಗ್), ವಿಜಯ ಕೆ.ಪಿ.(ಬಿ.ಎಸ್.ಪಿ.), ಶ್ರೀಕಾಂತ್ ಕೆ.(ಬಿ.ಜೆ.ಪಿ.), ರಂಜಿತ್ ರಾಜ್ ಎಂ.(ಅಣ್ಣಾ ಡೆಮೊಕ್ರೆಟಿಕ್ ಹ್ಯೂಮನ್ ರೈಟ್ಸ್ ಪಾರ್ಟಿ ಆಫ್ ಇಂಡಿಯಾ), ಎಂ.ಎ.ಲತೀಫ್(ಐ.ಎನ್.ಎಲ್.), ನಿಷಾಂತ್ ಐ.ಪಿ.(ಸ್ವತಂತ್ರ), ಸುಧಾಕರನ್ ಕೆ.(ಸ್ವತಂತ್ರ). 

        ಉದುಮಾ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳು: ಸಿ.ಎಚ್.ಕುಂಞಂಬು(ಸಿ.ಪಿ.ಎಂ.),  ಬಾಲಕೃಷ್ಣನ್ ಸಿ.(ಕಾಂಗ್ರೆಸ್), ಎ.ವೇಲಾಯುಧನ್(ಬಿ.ಜೆ.ಪಿ.), ಗೋವಿಂದನ್ ಬಿ.(ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ), ಕುಂಞಂಬು ಕೆ.(ಸ್ವತಂತ್ರ), ರಮೇಶನ್ ಕೆ.(ಸ್ವತಂತ್ರ). 

        ಕಾಞಂಗಾಡ್ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳು : ಇ.ಚಂದ್ರಶೇಖರನ್(ಸಿ.ಪಿ.ಐ), ಎಂ.ಬಾಲರಾಜ್(ಬಿ.ಜೆ.ಪಿ.), ಸುರೇಶನ್ ಪಿ.ವಿ.(ಕಾಂಗ್ರೆಸ್) ಅಬ್ದುಲ್ ಸಮದ್ ಟಿ.(ಎಸ್.ಡಿ.ಪಿ.ಐ.), ಟಿ.ಅಬ್ದುಲ್ ಸಮದ್(ಜನತಾದಳ ಯುನೈಟೆಡ್), ರೇಷ್ಮಾ ಕರಿವೇಡಗಂ(ಅಣ್ಣಾ ಡೆಮೋಕ್ರೆಟಿಕ್ ಹ್ಯೂಮನ್ ರೈಟ್ಸ್ ಪಾರ್ಟಿ ಆಫ್ ಇಂಡಿಯಾ), ಆಗಸ್ಟಿನ್(ಸ್ವತಂತ್ರ), ಕೃಷ್ಣನ್ ಪರಪ್ಪಚ್ಚಾಲ್(ಸ್ವತಂತ್ರ), ಮನೋಜ್ ಥಾಮಸ್(ಸ್ವತಂತ್ರ), ಶ್ರೀನಾಥ್ ಶಶಿ ಟಿ.ಸಿ.ವಿ.(ಸ್ವತಂತ್ರ), ಸುರೇಶ್ ಬಿ.ಸಿ.(ಸ್ವತಂತ್ರ). 

            ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳು : ರಾಜಗೋಪಾಲನ್ ಎಂ(ಸಿ.ಪಿ.ಎಂ.), ಷಿಬಿನ್ ಟಿ.ವಿ.(ಬಿ.ಜೆ.ಪಿ.), ಲಿಯಾಕತ್ತಾಲಿ ಪಿ.(ಎಸ್.ಡಿ.ಪಿ.ಐ.), ಮಹೇಶ್ ಟಿ.(ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ), ಸುಧನ್ ಟಿ.(ಅಣ್ಣಾ ಡೆಮೊಕ್ರೆಟಿಕ್ ಹ್ಯೂಮನ್ ರೈಟ್ಸ್ ಪಾರ್ಟಿ ಆಫ್ ಇಂಡಿಯಾ), ಜೋಸೆಫ್ ಎಂ.ಪಿ.(ಸ್ವತಂತ್ರ), ಜಾಯ್ ಜೋನ್(ಸ್ವತಂತ್ರ). 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries