HEALTH TIPS

ವಿಧಾನಸಭೆ ಚುನಾವಣೆ : ಏ.4,5,6 ರಂದು ಗಡಿಗಳ ಸೀಲ್

        ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂದ ಏ.4,5,6 ರಂದು ಕಾಸರಗೋಡು ಜಿಲ್ಲೆಯ ಗಡಿಗಳನ್ನು ಸೀಲ್ ನಡೆಸಲಾಗುವುದು. 

           ಚುನಾವಣೆಯನ್ನು ಸ್ವತಂತ್ರ, ಸುರಕ್ಷೆ ಸಹಿತವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಗಳ ಅಧಿಕಾರಗಳೊಂದಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಂಗಳೂರು, ಕೊಡಗು, ಕಣ್ಣೂರು, ಕಾಸರಗೋಡು ಜಿಲ್ಲೆಗಳ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದರು. 

        ಗಡಿ ಪ್ರದೇಶಗಳಲ್ಲಿ ತಪಾಸಣೆ ಕಡ್ಡಾಯಗೊಳಿಸಲಾಗುವುದು. ಪೆÇಲೀಸ್, ಅಬಕಾರಿ, ಕಂದಾಯ ಇಲಾಖೆಗಳು ಜಂಟಿಯಾಗಿ ತಪಾಸಣೆ ನಡೆಸುವರು. ಶಾಶ್ವತ ಅಪರಾಧಿಗಳ ಮಾಹಿತಿ ಸಂಗ್ರಹಿಸಿ ಗಡಿ ಪ್ರದೇಶಗಳು ಪರಸ್ಪರ ಹಸ್ತಾಂತರ ನಡೆಸಲು ಸಭೆ ನಿರ್ಧರಿಸಿದೆ. 

        ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಸಹಾಯಕ ಅಬಕಾರಿ ಕಮೀಷನರ್ ಬಾಬು ವರ್ಗೀಸ್, ಕಸ್ಟಂಸ್ ಕಮೀಷನರ್ ಇಮಾಮುದ್ದೀನ್ ಅಹಮ್ಮದ್, ಆದಾಯ ತೆರಿಗೆ ಅಧಿಕಾರಿ ಪ್ರೀತಾ ನಂಬ್ಯಾರ್, ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್, ಎಸ್.ಪಿ., ಡೆಪ್ಯೂಟಿ ಅಬಕಾರಿ ಕಮೀಷನರ್, ಕಣ್ನೂರು ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎನ್.ದೇವಿದಾಸ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ , ಎಸ್.ಪಿ., ಮಂಗಳೂರು ಅಬಕಾರಿ ಕಮೀಷನರ್, ಕಸ್ಟಂಸ್ ಕಮೀಷನರ್, ಆದಾಯ ತೆರಿಗೆ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries