HEALTH TIPS

ಅಂಬಿಲಡ್ಕ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

        

     ಕುಂಬಳೆ: ಅಂಬಿಲಡ್ಕ ಶ್ರೀ ಪೂವಾಣಿ ಕಿನ್ನಿಮಾಣಿ  ರಾಜನ್ ದೈವಸ್ಥಾನದಲ್ಲಿ ಏ.4ರಿಂದ ಏ.8ರವರೆಗೆ ಬಂಬ್ರಾಣ  ಯಜಮಾನ್ ಬಿ.ಮೋಹನ್‍ದಾಸ್ ರೈ ನೇತೃತ್ವದಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ  ವೇದಮೂರ್ತಿ  ಶಂಕರನಾರಾಯಣ  ಕಡಮಣ್ಣಾಯ ಕರ್ಕುಳಬೂಡು ಆಚಾರ್ಯತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. 

       ಏ.4ರಂದು  ಸಂಜೆ 6.30ರಿಂದ  ಭಜನೆ, 7.30ರಿಂದ ಬೆಜಪ್ಪೆ ಭಂಡಾರ ಮನೆಯಿಂದ  ಹಾಗೂ ಕಿದೂರು ಶ್ರೀ ಮಹಾದೇವ ದೇವಳದಿಂದ ಭಂಡಾರ ಆಗಮನ, 8.30ರಿಂದ ಶ್ರೀ ದೈವಗಳಿಗೆ ತಂಬಿಲ ಬಳಿಕ ಅನ್ನಸಂತರ್ಪಣೆ ನಡೆಯಲಿರುವುದು. ಏ.5ರಂದು ಸಂಜೆ 3ರಿಂದ ಭÀಜನೆ, 4.30ರಿಂದ  ಶ್ರೀ ಕಿನ್ನಿಮಾಣಿ ದೈವದ ನೇಮ, ಏ.6ರಂದು ಸಂಜೆ 3ರಿಂದ ಭಜನೆ, 4.30ರಿಂದ ಶ್ರೀ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ ನಡೆಯಲಿದೆ. ಏ.7ರಂದು ಸಂಜೆ 3ರಿಂದ ಭಜನೆ,  4.30ರಿಂದ  ಶ್ರೀ ಬೀರ್ಣಾಳ್ವ ದೈವ ಹಾಗೂ ಪರಿವಾರ ದೈವಗಳ ನೇಮ ನಡೆಯಲಿದೆ. ಏ.8ರಂದು  ಬೆಳಿಗ್ಗೆ 11ರಿಂದ  ಶ್ರೀ ದೈವಗಳಿಗೆ ತಂಬಿಲ, ಭಂಡಾರ ಇಳಿಯುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries