HEALTH TIPS

ಸ್ಪೀಕರ್ ಯುಎಇ ಕಾನ್ಸುಲ್ ಜನರಲ್ ಗೆ ದೊಡ್ಡ ಮೊತ್ತವನ್ನು ನೀಡಿದ್ದರು: ಸರಿತ್ ಹೇಳಿಕೆ ಬಹಿರಂಗ!

          ಕೊಚ್ಚಿ: ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ವಿರುದ್ಧ ಚಿನ್ನ ಕಳ್ಳಸಾಗಣೆ ಬಗ್ಗೆ ಪ್ರಕರಣದ ಆರೋಪಿ ಸರಿತ್ ನೀಡಿದ ಹೇಳಿಕೆ ಕೂಡ ಬಹಿರಂಗಗೊಂಡಿದೆ. ಸ್ಪೀಕರ್ ಯುಎಇ ಕಾನ್ಸುಲ್ ಜನರಲ್ ಗೆ ದೊಡ್ಡ ಮೊತ್ತವನ್ನು ಪಾವತಿಸಿದ್ದಾರೆ ಎಂದು ಸರಿತ್ ಹೇಳಿರುವರು. ಲೋಕ ಕೇರಳಸಭೆಯ ಲಾಂಛನದೊಂದಿಗೆ ಚೀಲದಲ್ಲಿ 10 ಕಟ್ಟುಗಳ ನೋಟುಗಳನ್ನು ನೀಡಲಾಯಿತು. ತಿರುವನಂತಪುರದ ಫ್ಲ್ಯಾಟ್ ನಲ್ಲಿ ಚೀಲವನ್ನು ತನಗೆ ಮತ್ತು ಸ್ವಪ್ನಾಳಿಗೆ ನೀಡಲಾಗಿದೆ ಎಂದು ಸರಿತ್ ಹೇಳಿದರು.

          ಚೀಲವನ್ನು ಈಗಾಗಲೇ ಸ್ವಪ್ನಾಳ ಮನೆಯಿಂದ ಕಸ್ಟಮ್ಸ್ ವಶಪಡಿಸಿಕೊಂಡಿದೆ. ಅಪರಾಧ ಶಾಖೆ ನೋಂದಾಯಿಸಿದ ಎಫ್‍ಐಆರ್ ವಿರುದ್ಧ ಹೈಕೋರ್ಟ್‍ನಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯೊಂದಿಗೆ ಸರಿತ್ ಅವರ ಹೇಳಿಕೆಯನ್ನು ಸಲ್ಲಿಸಲಾಗಿದೆ.

        ಸ್ಪೀಕರ್ ಸ್ವಪ್ನಾ ಸುರೇಶಳ ಕಾರಿನಲ್ಲಿ ತಮ್ಮ ಅಧಿಕೃತ ನಿವಾಸಕ್ಕೆ ಮರಳಿದರು ಎಂದು ಸರಿತ್ ಹೇಳಿರುವರು. ವಿಮಾನ ನಿಲ್ದಾಣದ ಎದುರಿನ ಮಾರುತಮ್ ರಾಯಲ್ ಅಪಾಟ್ಮೆರ್ಂಟ್ ನಲ್ಲಿ ಚೀಲವನ್ನು ಹಸ್ತಾಂತರಿಸಲಾಯಿತು ಎಂದು ಸರಿತ್ ಹೇಳಿಕೆ ನೀಡಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries