HEALTH TIPS

'ಸಂಸದ್ ಟಿವಿ' ನೂತನ ವಾಹಿನಿ ಉದಯ: ನಿವೃತ್ತ ಐಎಎಸ್ ಅಧಿಕಾರಿ ರವಿ ಕಪೂರ್ ಸಿಇಒ

              ನವದೆಹಲಿ: ರಾಜ್ಯಸಭಾ ಟಿವಿ ಹಾಗೂ ಲೋಕಸಭಾ ಟಿವಿ ಒಗ್ಗೂಡಿಸಲಾಗಿದ್ದು "ಸಂಸದ್ ಟಿವಿ" ಹೆಸರಿನ ನೂತನ ವಾಹಿನಿ ಉದಯಿಸಿದೆ. ಈ ವಾಹಿನಿಯಲ್ಲಿ ಲೋಕಸಭೆ ಕಲಾಪಗಳು ಹಿಂದಿಯಲ್ಲಿಯೂ ರಾಜ್ಯಸಭೆ ಕಲಾಪಗಳು ಆಂಗ್ಲ ಭಾಷೆಯಲ್ಲಿಯೂ ಪ್ರಸಾರವಾಗಲಿದೆ.

        ನೂತನ ವಾಹಿನಿಯ ಸಿಇಒ ಆಗಿ ನಿವೃತ್ತ ಐಎಎಸ್ ಅಧಿಕಾರಿ ರವಿ ಕಪೂರ್ ಒಂದು ವರ್ಷದ ಅವಧಿಗೆ ನೇಮಕವಾಗಿದ್ದಾರೆ.

         ಲೋಕಸಭಾ ಟಿವಿ ಹಾಗೂ ರಾಜ್ಯಸಭಾ ಟಿವಿಗಳನ್ನು ಒಗ್ಗೂಡಿಸುವ ಬಗ್ಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ರಾಜ್ಯಸಭಾ ಸ್ಪೀಕರ್ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಒಮ್ಮತದಿಂದ ತೀರ್ಮಾನ ತೆಗೆದುಕೊಂಡರು. ಆಡಳಿತಾತ್ಮಕ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದ್ದು ವಿಲೀನದೊಂದಿಗೆ ರಾಜ್ಯಸಭೆ ಟಿವಿ ಸಿಇಒ ಮನೋಜ್ ಕುಮಾರ್ ಪಾಂಡೆ ಅವರನ್ನು ಸ್ಥಾನದಿಂದ ವಿಸರ್ಜಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರ ಎಂಗೇಜ್ ಮೆಂಟ್ ನಿಯಮಾವಳಿಗಳಂತೆ ಅವರಿಗೆ ಒಂದು ತಿಂಗಳ ವೃತ್ತಿಪರ ಶುಲ್ಕಕ್ಕೆ ಸಮನಾದ ಮೊತ್ತವನ್ನು ನೀಡಲಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries