ಬೇಸಿಗೆಯ ಕಡು ಬಿಸಿಲು ಈ ಬಾರಿ ತೀವ್ರ ಏರಿಕೆಯ ಉಷ್ಣಾಂಶದೊಂದಿಗೆ ಎಲ್ಲೆಡೆ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ದೇಹಾರೋಗ್ಯದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಕೆಲವು ಮುಂಜಾಗ್ರತೆಗಳ ಅಗತ್ಯ ಖಂಡಿತಾ ಇದೆ.
ಬಿಸಿಲಿ ಬಹು ಒತ್ತಡದ ಈ ಸಂದರ್ಭ ಮುಖ್ಯವಾಗಿ ನಿರ್ಜಲೀಕರಣ ನಮ್ಮನ್ನು ಕಾಡುವ ದೊಡ್ಡ ಸವಾಲಾಗಿದೆ. ಅತಿಯಾದ ಉಷ್ಣತೆಯು ಬೆವರುವುದು,ತತ್ಪರಿಣಾಮ ದೇಹದಲ್ಲಿ ನೀರಿನ ದೊಡ್ಡ ಪ್ರಮಾಣದ ಕೊರತೆ, ಸೋಡಿಯಂ ಮತ್ತು ಪೆÇಟ್ಯಾಸಿಯಮ್ ನಂತಹ ಖನಿಜಗಳ ಏರುವಿಕೆ ತೀವ್ರ ಆಯಾಸಕ್ಕೆ ಕಾರಣವಾಗುತ್ತದೆ. ಅತಿಯಾದ ಆಯಾಸ ಮತ್ತು ದಣಿವು ಖಿನ್ನತೆಗೆ ಕಾರಣವಾಗಬಹುದು. ಸೂರ್ಯ ರಶ್ಮಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಜೀವಕ್ಕೂ ಹಲವು ಕಡೆ ಅಪಾಯಗಳಿವೆ.
ನಮ್ಮ ಪ್ರಯಾಣದ ಸಂದರ್ಭ ಎಷ್ಟು ಅವಸರದಲ್ಲಿದ್ದರೂ ಸಾಕಷ್ಟು ಕುಡಿಯುವ ಶುದ್ದ ಜಲ ಇದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ನೀರನ್ನು ಕೈಯಲ್ಲಿರಿಸಲು ಮರೆಯಲೇ ಬಾರದು. ಇದು ರಸಭರಿತವಾದ ನೀರು, ಇದ್ದಿಲು ನೀರು ಮತ್ತು ತೆಳ್ಳಗಿನ ಹಣ್ಣಿನ ರಸವೂ ಆಗಿರಬಹುದು.
ಪ್ರತಿದಿನ 12 ರಿಂದ 15 ಲೋಟ ನೀರು ಈ ಋತುವಲ್ಲಿ ಅಗತ್ಯವಾಗಿ ಕುಡಿಯಬೇಕಾಗುತ್ತದೆ. (ಮೂತ್ರಪಿಂಡ ಕಾಯಿಲೆಯಂತಹ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯರು ನಿಗದಿಪಡಿಸಿದ ಪ್ರಮಾಣದಲ್ಲಿ). ಕೋಲ್ಡ್ ಕೋಲಾ ಮತ್ತು ಇತರ ತಂಪು ಪಾನೀಯಗಳು ಸಮಾಧಾನಕರವೆಂದು ತೋರುತ್ತದೆ. ಆದರೆ ಕೃತಕವಾಗಿ ಶೈತಲೀಕೃತವಾದ ಅಂತಹ ಪಾನೀಯಗಳಿಂದ ದೂರವಿರುವುದು ಅತ್ಯಂತ ಹೆಚ್ಚು ಸೂಕ್ತವಾದುದು. ಬದಲಾಗಿ, ಹೆಚ್ಚು ಉಪ್ಪು ಅಥವಾ ಸಕ್ಕರೆ ಸೇರಿಸದೆ ಸಾಕಷ್ಟು ನಿಂಬೆ ಪಾನಕ ಮತ್ತು ಹಸಿರು ಚಹಾವನ್ನು ಕುಡಿಯುವುದು ಹಿತ.
ಚಹಾ ಮತ್ತು ಕಾಫಿ ಕಡಿಮೆ ಮಾಡಬೇಕು. ಹಣ್ಣಿನ ರಸವನ್ನು ಮಧ್ಯಂತರದಲ್ಲಿ ತೆಗೆದುಕೊಳ್ಳಬಹುದು. ಶಾಖದಿಂದ ಪರಿಹಾರ ಪಡೆಯಲು ಐಸ್ ಕ್ರೀಮ್ ಅನ್ನು ಅವಲಂಬಿಸಿರುವುದು ನಿರ್ಜಲೀಕರಣವನ್ನು ತಡೆಯುವುದಲ್ಲದೆ, ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತದೆ.
ಬೇಸಿಗೆಯಲ್ಲಿ ಜೀರ್ಣಕಾರಿ ಪ್ರಕ್ರಿಯೆಯು ನಿಧಾನವಾಗುವುದರಿಂದ ಹುರಿದ ಆಹಾರ-ಖಾದ್ಯಗಳಿಂದ ಸಾಧ್ಯವಾದಷ್ಟು ದೂ|ರವಿರಬೇಕು. ಬದಲಿಗೆ ಆವಿಯಲ್ಲಿ ಬೇಯಿಸಿದ ಆಹಾರಗಳಿಗೆ ಆದ್ಯತೆ ನೀಡಬಹುದು.