HEALTH TIPS

ಕೇರಳದಲ್ಲಿ ರಾಜ್ಯಸಭಾ ಚುನಾವಣೆ; ಚುನಾವಣಾ ಆಯೋಗದಿಂದ ಶೀಘ್ರ ದಿನಾಂಕ ಘೋಷಣೆ

                              

        ಕೊಚ್ಚಿ: ಕೇರಳದಲ್ಲಿ ರಾಜ್ಯಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶೀಘ್ರದಲ್ಲೇ ಪ್ರಕಟಿಸಲಿದೆ. ಕಾನೂನು ಅನುಸಾರ ವೇಳಾಪಟ್ಟಿಯಲ್ಲಿರುವಂತೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೈಕೋರ್ಟ್‍ಗೆ ಮಾಹಿತಿ ನೀಡಿದೆ. ರಾಜ್ಯಸಭಾ ಚುನಾವಣೆಯನ್ನು ಸ್ಥಗಿತಗೊಳಿಸುವುದರ ವಿರುದ್ಧದ ಅರ್ಜಿಯಲ್ಲಿ ಚುನಾವಣಾ ಆಯೋಗದ ವಿವರಣೆ ನೀಡಿದೆ.

             ಈ ಹಿಂದೆ ರಾಜ್ಯಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಲಾಗಿದ್ದರೂ ಯಾವುದೇ ಅಧಿಸೂಚನೆ ಹೊರಡಿಸಲಾಗಿಲ್ಲ. ಕಾನೂನು ಸಚಿವಾಲಯದ ಶಿಫಾರಸುಗಳು ಚುನಾವಣಾ ಆಯೋಗದ ಕ್ರಮಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆಯೋಗವು ಹೈಕೋರ್ಟ್‍ಗೆ ತಿಳಿಸಿದೆ. ನ್ಯಾಯಾಲಯವು ಹೇಳಿಕೆಯನ್ನು ಲಿಖಿತವಾಗಿ ತಿಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದು ವಿಚಾರಣೆಯನ್ನು ನಾಳೆಯವರೆಗೆ ಮುಂದೂಡಿದೆ.

           ಕೇರಳದಲ್ಲಿ ಖಾಲಿ ಇರುವ ಮೂರು ರಾಜ್ಯಸಭಾ ಸ್ಥಾನಗಳಿಗೆ ಏಪ್ರಿಲ್ 12 ರಂದು ಚುನಾವಣೆ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ವಯಲಾರ್ ರವಿ, ಕೆ. ಕೆ ರಾಗೇಶ್ ಮತ್ತು ಅಬ್ದುಲ್ ವಹಾಬ್ ಅವರ ತೆರವಿಂದ ಖಾಲಿ ಬಿದ್ದಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


   


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries