ವಯನಾಡ್: ಕಾಂಗ್ರೆಸ್ ನಲ್ಲಿ ಉಂಟಾಗುತ್ತಿರುವ ಸ್ಟೋಟಕ ವಿದ್ಯಮಾನಗಳು ಪಕ್ಷದ ಅಸ್ತಿತ್ವವನ್ನು ಪದೇಪದೇ ಎಚ್ಚರಿಸುತ್ತಿದೆ. ಮಾಜಿ ಕೆಪಿಸಿಸಿ ಉಪಾಧ್ಯಕ್ಷೆ ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ಕೆ.ಸಿ.ರೋಸಕುಟ್ಟಿ ಅವರು ನಿನ್ನೆ ಕಾಂಗ್ರೆಸ್ ತೊರೆದು ಸಿಪಿಎಂಗೆ ಸೇರಿದ್ದು ಕಾಂಗ್ರೆಸ್ನಲ್ಲಿ ಮಹಿಳೆಯರನ್ನು ನಿರ್ಲಕ್ಷಿಸಲಾಗಿದೆ ಎಂದು ರೊಸಾಕುಟ್ಟಿ ಆರೋಪಿಸಿರುವರು. ಆದರೆ ಸಂಸದ ರಾಹುಲ್ ಗಾಂಧಿ ಪ್ರತಿನಿಧಿಸುವ ಕ್ಷೇತ್ರದ ಹಿರಿಯ ಮಹಿಳಾ ನಾಯಕಿಯೋರ್ವ, ರಾಹುಲ್ ಗಾಂಧಿ ಕೇರಳಕ್ಕೆ ಆಗಮಿಸಿದ ದಿನವೇ ಪಕ್ಷವನ್ನು ತೊರೆದಿರುವುದು ಪಕ್ಷದ ವರ್ಚಸ್ಸಿಗೆ ಮುಖಭಂಗದ ಪ್ರತೀಕವಾಗಿದೆ. ಚುನಾವಣಾ ಘೋಷಣೆಯ ನಂತರ ವಯನಾಡಿನಲ್ಲಿ ಕಾಂಗ್ರೆಸ್ ಪಕ್ಷ ತೊರೆದ ಮೂರನೇ ಪ್ರಮುಖ ನಾಯಕಿ ರೋಸಕುಟ್ಟಿ ಎನ್ನುವುದೂ ಉಲ್ಲೇಖಾರ್ಹ.
ರಾಜ್ಯದಲ್ಲಿ ಚುನಾವಣೆ ಕಾವೇರುತ್ತಿರುವಂತೆ ಹಲವು ನಾಯಕರು ಪ್ರತಿದಿನ ಕಾಂಗ್ರೆಸ್ ನಿಂದ ವಿಮುಖರಾಗುತ್ತಿದ್ದಾರೆ. ಕೆ.ಸಿ.ರೋಸಾಕುಟ್ಟಿ ವಯನಾಡಿನ ಜನಪ್ರಿಯ ನಾಯಕಿ. ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ. ಅವರು ಬತ್ತೇರಿಯ ಮಾಜಿ ಶಾಸಕರೂ ಆಗಿದ್ದಾರೆ. ಕಾಂಗ್ರೆಸ್ ನಲ್ಲಿ ಮಹಿಳೆಯರಿಗೆ ಯಾವುದೇ ಪರಿಗಣನೆ ನೀಡಲಾಗುವುದಿಲ್ಲ ಎಂದವರು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಸ್ಥಾನಗಳನ್ನು ಪಡೆಯಲು ಮಹಿಳೆಯರು ತಲೆ ಬೋಳಿಸಿಕೊಳ್ಳಬೇಕಾದ ಪ್ರವೃತ್ತಿ ಇದೆ. ಇಂದಿನಿಂದ ಸಿಪಿಎಂಗೆ ಸೇರಿಕೊಂಡು ಎಡಪಂಥೀಯರೊಂದಿಗೆ ಕೆಲಸ ಮಾಡುವುದಾಗಿ ರೋಸಾಕುಟ್ಟಿ ಹೇಳಿದರು. ಸಿಪಿಎಂ ಕೇಂದ್ರ ಸಮಿತಿಯ ಸದಸ್ಯರಾದ ಶ್ರೀಮತಿ ಟೀಚರ್ ರೋಸಾಕುಟ್ಟಿಯವರ ಮನೆಗೆ ಭೇಟಿ ನೀಡಿದ್ದರು. ಜೊತೆಗೆ ಎಂ.ವಿ.ಶ್ರೇಯಾಂಸ್ ಕುಮಾರ್ ಮತ್ತು ಎಂ.ಎಸ್.ವಿಶ್ವನಾಥನ್ ಅವರು ರೋಸಾಕುಟ್ಟಿಯನ್ನು ಸಿಪಿಎಂಗೆ ಸ್ವಾಗತಿಸಿದರು.
ರಾಹುಲ್ ಗಾಂಧಿ ಕ್ಷೇತ್ರದಿಂದ ಇತ್ತೀಚೆಗೆ ಕಾಂಗ್ರೆಸ್ ತೊರೆದ ಮೂರನೇ ಪ್ರಮುಖ ನಾಯಕಿ ಕೆ.ಸಿ.ರೋಸಕುಟ್ಟಿ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಎಸ್.ವಿಶ್ವನಾಥನ್ ಮತ್ತು ಕೆ.ಪಿ.ಅನಿಲ್ ಕುಮಾರ್ ಅವರು ಕೆಲವು ವಾರಗಳ ಹಿಂದೆ ಪಕ್ಷವನ್ನು ತೊರೆದಿದ್ದರು. ಎಂ.ಎಸ್. ವಿಶ್ವನಾಥನ್ ಅವರು ಬತ್ತೇರಿಯಲ್ಲಿ ಎಲ್ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಲ್ಪೆಟ್ಟ ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರ ವಿರುದ್ಧ ಜಿಲ್ಲಾ ನಾಯಕರು ಎಚ್ಚರಿಕೆ ನೀಡಿದ್ದರು. ಆದರೆ, ಗುಂಪುವಾರು ಸಂಬಂಧದ ಭಾಗವಾಗಿ ಸ್ಪರ್ಧಿಸಲು ಟಿ ಸಿದ್ದೀಕ್ ಕಲ್ಪೆಟ್ಟಾಗೆ ಬಂದಿದ್ದಾರೆ ಎಂದು ನಾಯಕರು ಆರೋಪಿಸಿದ್ದರು.