ಕಾಸರಗೋಡು: ಜಿಲ್ಲೆಯಲ್ಲಿ ಎಸ್.ಡಿ.ಪಿ.ಐ. ಮತ್ತು ಸಿಪಿಎಂ ನಡುವೆ ರಹಸ್ಯ ಒಪ್ಪಂದ ಇದೆ ಎಂದು ಆರೋಪಿಸಲಾಗಿದೆ. ಬ್ಲಾಕ್ ಪಂಚಾಯಿತಿಗಳಲ್ಲಿಯೂ ಇರುವ ಎಸ್ಡಿಪಿಐ ಜಿಲ್ಲೆಯಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳ ಪೈಪೆÇೀಟಿ ನಡೆಸುತ್ತಿದೆ.
ಬಲವಾದ ತ್ರಿಕೋನ ಸ್ಪರ್ಧೆ ಇರುವ ಯಾವುದೇ ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಸ್ಡಿಪಿಐ ಸಿದ್ಧವಾಗಿಲ್ಲ. ಈ ಬಾರಿ ಎಸ್ಡಿಪಿಐ ಕಾಞಂಗಾಡ್ ಮತ್ತು ತ್ರಿಕ್ಕರಿಪುರ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಗೆದ್ದ ಪಂಚಾಯಿತಿಗಳನ್ನು ಒಳಗೊಂಡ ಮಂಜೇಶ್ವರ, ಕಾಸರಗೋಡು ಮತ್ತು ಉದುಮ ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜಿಲ್ಲಾ ಮತ್ತು ರಾಜ್ಯ ನಾಯಕತ್ವ ಸಿದ್ಧವಾಗಿಲ್ಲ. ಇದು ಎಲ್ಡಿಎಫ್ಗೆ ಸಹಾಯ ಮಾಡುವುದು ಎಂದು ಈಗಾಗಲೇ ಆರೋಪಗಳನ್ನು ಹೊರಿಸಲಾಗಿದೆ.
ಈಗ ಸ್ಪರ್ಧಿಸಲಿರುವ ಕ್ಷೇತ್ರ ಪ್ರಭಾವ ಬೀರದ ಕ್ಷೇತ್ರವಾದ್ದರಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಪಕ್ಷ ಹೇಳಿದೆ. ಆದರೆ ಕಳೆದ ಚುನಾವಣೆಯಲ್ಲಿ ಅವರು ಎರಡೂ ಕ್ಷೇತ್ರಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರು. ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅದು ಮಂಜೇಶ್ವರ ಬ್ಲಾಕ್ ಪಂಚಾಯತ್ನಲ್ಲಿ ಒಂದು ಸ್ಥಾನವನ್ನು ಗೆದ್ದಿತ್ತು. ಬದಿಯಡ್ಕ, ಕುಂಬ್ಡಾಜೆ, ಮೀಂಜ ಮತ್ತು ವರ್ಕಾಡಿ ಪಂಚಾಯಿತಿಗಳಲ್ಲಿ ನಿರ್ಣಾಯಕ ಶಕ್ತಿಯಾಗಿತ್ತು. ಅಂತಹ ಸ್ಥಳಗಳಲ್ಲಿಯೇ ಎಸ್ಡಿಪಿಐ ಸಿಪಿಎಂ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಂಜೇಶ್ವರ ಮತ್ತು ಕಾಸರಗೋಡಲ್ಲಿ ಬಿಜೆಪಿಗೆ ಗೆಲುವಿನ ಅತ್ಯುತ್ತಮ ಅವಕಾಶ ಇರುವ ಕ್ಷೇತ್ರಗಳಾಗಿವೆ. ಎರಡು ಪಕ್ಷಗಳು ಇಲ್ಲಿ ಮತಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಲಾಗಿದೆ.