HEALTH TIPS

ಕಡಗಂಪಳ್ಳಿಯಿಂದ ವಿವರಣೆ ಕೋರಿದ ಯೆಚೂರಿ: ಸಿಪಿಎಂ ನಿಲುವು ಸ್ಪಷ್ಟ: ಕೆ ಸುರೇಂದ್ರನ್

         ಕಾಸರಗೋಡು: ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರ ಶಬರಿಮಲೆ ಸಂಬಂಧವಾದ ಹೇಳಿಕೆಗೆ ವಿವರಣೆ ಕೇಳುವ ಮೂಲಕ, ಸಿಬಿಎಂ ಶಬರಿಮಲೆ ವಿಷಯದ ಬಗ್ಗೆ ತನ್ನ ನಿಲುವನ್ನು ಬದಲಾಯಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ವಿರುದ್ಧದ ಹೇಳಿಕೆ ಬಹಳ ಗಂಭೀರವಾಗಿದೆ. ಸ್ಪೀಕರ್ ಸ್ಥಾನಕ್ಕೆ ಕಳಂಕ ತರುವಂತಹ ಕ್ರಮವಿದು ಎಂದು ಹೇಳಿದರು.


         ನಂಬಿಕೆಗಳ ರಕ್ಷಣೆಗೆ ಯಾವುದೇ ಬೆಲೆಯಿಲ್ಲ ಎಂದು ಸಿಪಿಎಂ ಸ್ಪಷ್ಟಪಡಿಸಿದೆ. ಮಹಿಳೆಯರು ಶಬರಿಮಲೆಗೆ ತೆರಳುವುದು  ತಪ್ಪು ಎಂದು ಕಡಕಂಪಳ್ಳಿ ಹೇಳಿಕೆಯಲ್ಲಿ ವಿವರಣೆ ಕೇಳುತ್ತೇನೆ ಎಂದು ಸೀತಾರಾಮ್ ಯೆಚೂರಿ ಹೇಳುತ್ತಾರೆ. ಇದರರ್ಥ ಸಿಪಿಎಂ ತನ್ನ ಮೂಲ ಸಿದ್ದಾಂತಗಳಿಂದ ಹಿಂದೆ ಸರಿದಿಲ್ಲ ಎಂಬುದು ಸ್ಪಷ್ಟ ಎಂದು ಸುರೇಂದ್ರನ್ ಹೇಳಿದ್ದಾರೆ.

          ಸ್ಪೀಕರ್ ವಿರುದ್ಧದ ಹೇಳಿಕೆ ಅತ್ಯಂತ ಗಂಭೀರವಾಗಿದೆ.  ಸ್ಪೀಕರ್ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ವಿಧಾನ ಸಭೆಯ ಶುದ್ದೀಕರಣಕ್ಕೆ ಎನ್‍ಡಿಎ ವಿಧಾನಸಭೆಗೆ ಪ್ರವೇಶಿಸಬೇಕು ಎಂದು ಹೇಳಿದರು. ಬಿಎಲ್‍ಒಗಳು ಸೇರಿದಂತೆ ಅಧಿಕಾರಿಗಳು ರಾಜಕೀಯ ಆಡುವ ಮೂಲಕ ಅಂಚೆ ಮತಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸುರೇಂದ್ರನ್ ಆರೋಪಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries