ತಿರುವನಂತಪುರ: ಕೇರಳದಲ್ಲಿ ಇಂದು 26,685 ಜನರಿಗೆ ಕೋವಿಡ್ ಖಚಿತಪಡಿಸಲಾದೆ. ಕೋಝಿಕೋಡ್ 3767, ಎರ್ನಾಕುಳಂ 3320, ಮಲಪ್ಪುರಂ 2745, ತ್ರಿಶೂರ್ 2584, ತಿರುವನಂತಪುರ 2383, ಕೊಟ್ಟಾಯಂ 2062, ಕಣ್ಣೂರು 1755, ಆಲಪ್ಪುಳ 1750, ಪಾಲಕ್ಕಾಡ್ 1512, ಕೊಲ್ಲಂ 1255, ಪತ್ತನಂತಿಟ್ಟು 933, ಕಾಸರಗೋಡು 908, ವಯನಾಡ್ 873, ಇಡುಕ್ಕಿ 838 ಎಂಬಂತೆ ಸೋಂಕು ಬಾಧಿಸಿದೆ.
ಎರಡನೇ ಹಂತದ ಪರೀಕ್ಷೆಯ ಅಂಗವಾಗಿ ಬುಧವಾರ ಮತ್ತು ಗುರುವಾರ ರಾಜ್ಯದ ವಿವಿಧ ಭಾಗಗಳಿಂದ 2,90,262 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ 1,31,155 ಮಾದರಿಗಳನ್ನು ಕಳೆದ 24 ಗಂಟೆಗಳಲ್ಲಿ ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.20.35 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,49,89,949 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಬಂದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (108), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 116 ಮಂದಿ ಜನರಿಗೆ ಈವರೆಗೆ ದೃಢಪಡಿಸಲಾಗಿದೆ. ಈ ಪೈಕಿ 112 ಮಂದಿಗೆ ಋಣಾತ್ಮPವಾಗಿದೆÀ. ಒಟ್ಟು 11 ಮಂದಿ ಜನರಿಗೆ ಜೆನೆಟಿಕ್ ಮಾರ್ಪಟ್ಟ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 25 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 5,080 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 259 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 24,596 ಮಂದಿ ಜನರಿಗೆ ಸೋಂಕು ತಗಲಿತು. 1757 ಮಂದಿಗೆ ಸಂಪರ್ಕದ ಮೂಲಗಳು ಸ್ಪಷ್ಟವಾಗಿಲ್ಲ. ಕೋಝಿಕೋಡ್ 3706, ಎರ್ನಾಕುಳಂ 3265, ಮಲಪ್ಪುರಂ 2634, ತ್ರಿಶೂರ್ 2550, ತಿರುವನಂತಪುರ 1957, ಕೊಟ್ಟಾಯಂ 1835, ಕಣ್ಣೂರು 1548, ಆಲಪ್ಪುಳ 1747, ಪಾಲಕ್ಕಾಡ್ 690, ಕೊಲ್ಲಂ 1247, ಪತ್ತನಂತಿಟ್ಟು 857, ಕಾಸರಗೋಡು 880, ವಯನಾಡ್ 860, ಇಡುಕ್ಕಿ 820 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 73 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 24, ತ್ರಿಶೂರ್ 15, ಪಾಲಕ್ಕಾಡ್ 12, ಪತ್ತನಂತಿಟ್ಟು 7, ವಯನಾಡ್ 5, ಕಾಸರಗೋಡು 4, ಎರ್ನಾಕುಳಂ 3, ಕೊಲ್ಲಂ 2 ಮತ್ತು ಕೊಟ್ಟಾಯಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 7067 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 794, ಕೊಲ್ಲಂ 406, ಪತ್ತನಂತಿಟ್ಟು 278, ಆಲಪ್ಪುಳ 583, ಕೊಟ್ಟಾಯಂ 694, ಇಡುಕ್ಕಿ 96, ಎರ್ನಾಕುಳಂ 821, ತ್ರಿಶೂರ್ 684, ಪಾಲಕ್ಕಾಡ್ 372, ಮಲಪ್ಪುರಂ 540, ಕೋಝಿಕ್ಕೋಡ್ 858, ವಯನಾಡ್ 127, ಕಣ್ಣೂರು 595, ಕಾಸರಗೋಡು 219 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 1,98,576 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,73,202 ಮಂದಿ ಜನರನ್ನು ಕೋವಿಡ್ ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,31,587 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,13,172 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 18,415 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 3476 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 15 ಹೊಸ ಹಾಟ್ಸ್ಪಾಟ್ಗಳಿವೆ. ಯಾವುದೇ ಪ್ರದೇಶವನ್ನು ಹಾಟ್ಸ್ಪಾಟ್ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 538 ಹಾಟ್ಸ್ಪಾಟ್ಗಳಿವೆ.






Hai
ಪ್ರತ್ಯುತ್ತರಅಳಿಸಿ