HEALTH TIPS

ರಾಜ್ಯದಲ್ಲಿ ವಾರಾಂತ್ಯದಲ್ಲಿ ಲಾಕ್‍ಡೌನ್ ಇರದು: ರಾತ್ರಿ ತಪಾಸಣೆಗಳನ್ನು ಬಿಗಿಗೊಳಿಸಲಾಗುತ್ತದೆ; ಕೊರೋನಾ ಪರೀಕ್ಷೆಗಳ ಹೆಚ್ಚಳ: ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ

                     

            ತಿರುವನಂತಪುರ: ರಾಜ್ಯದಲ್ಲಿ ಅತಿ ವೇಗದಲ್ಲಿ ಕೊರೋನಾ ಹರಡುತ್ತಿದ್ದರೂ ಸದ್ಯಕ್ಕೆ ವಾರಾಂತ್ಯದಲ್ಲಿ ಲಾಕ್‍ಡೌನ್ ವಿಧಿಸದಿರಲು ನಿರ್ಧರಿಸಲಾಗಿದೆ. ಇದೇ ವೇಳೆ ರಾತ್ರಿಯ  ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

             ವಾರಾಂತ್ಯದಲ್ಲಿ ರಾಜ್ಯದಲ್ಲಿ ಕಫ್ರ್ಯೂ ವಿಧಿಸುವುದಿಲ್ಲ. ಏತನ್ಮಧ್ಯೆ, ರಾತ್ರಿ ಕಫ್ರ್ಯೂ ಸಮಯದಲ್ಲಿ ಕಠಿಣ ತಪಾಸಣೆ ನಡೆಸಲು ಪೋಲೀಸರಿಗೆ ಸೂಚನೆ ನೀಡಲಾಯಿತು. ಕಫ್ರ್ಯೂ ಸಮಯದಲ್ಲಿ ಜನರು ರಾತ್ರಿ ಒಂಬತ್ತರಿಂದ ಬೆಳಿಗ್ಗೆ ಐದು ಗಂಟೆಯವರೆಗೆ ಅನಗತ್ಯವಾಗಿ ರಸ್ತೆಗೆ ಬರದಂತೆ ಕಟ್ಟುನಿಟ್ಟಿನಿಂದ ತಡೆಯಲಾಗುತ್ತದೆ. 

              ಹೆಚ್ಚಿನ ಪರೀಕ್ಷಾ ಧನಾತ್ಮಕ ದರ ಹೊಂದಿರುವ ಪ್ರದೇಶಗಳಲ್ಲಿ ವಾಸಿಸುವ ಎಲ್ಲರನ್ನು ಪರೀಕ್ಷಿಸಲು ಸಹ ನಿರ್ಧರಿಸಲಾಯಿತು. ಜಿಲ್ಲಾ ಸರಾಸರಿ ಪರೀಕ್ಷಾ ಧನಾತ್ಮಕ ದರಕ್ಕಿಂತ ಎರಡು ಪಟ್ಟು ಹೆಚ್ಚು ಇರುವ ಪಂಚಾಯಿತಿಗಳಲ್ಲಿ ಸಾಮೂಹಿಕ ಕೊರೊನಾ ಪರೀಕ್ಷೆ ಏರ್ಪಡಿಸಲಾಗುವುದು. 

        ಕೊರೋನದ ಎರಡನೇ ಅಲೆಗೆ  ಕಾರಣವಾದ ವೈರಸ್ ನಲ್ಲಿನ ರೂಪಾಂತರಗಳ ಬಗ್ಗೆ ವೈಜ್ಞಾನಿಕ ಅಧ್ಯಯನಗಳನ್ನು ಸಹ ನಡೆಸಲಾಗುವುದು. ವೈರಸ್ ನ ಆನುವಂಶಿಕ ವ್ಯತ್ಯಾಸವನ್ನು ಕಂಡುಹಿಡಿಯಲು ವಂಶವಾಹಿ ಅನುಕ್ರಮ ಅಧ್ಯಯನವನ್ನು ನಡೆಸಲು ತೀರ್ಮಾನಿಸಲಾಯಿತು. ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯ ಹೊರತಾಗಿಯೂ, ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಐಸಿಯು ಸೌಲಭ್ಯಗಳು ಮತ್ತು ವೆಂಟಿಲೇಟರ್ ಸೌಲಭ್ಯಗಳು ರಾಜ್ಯದಾದ್ಯಂತದ ಆಸ್ಪತ್ರೆಗಳಲ್ಲಿ ಲಭ್ಯವಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries