ಕಣ್ಣೂರು: ಹೆಚ್ಚುತ್ತಿರುವ ಕೊರೋನಾ ಹರಡುವಿಕೆಯಿಂದ ಭಕ್ತರಿಗೆ ಪರಶ್ಚಿನಿಕಡವು ಮುತಪ್ಪನ್ ಕ್ಷೇತ್ರ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಮುಂದಿನ ಹತ್ತು ದಿನಗಳವರೆಗೆ ನಿರ್ಬಂಧಗಳು ಜಾರಿಯಲ್ಲಿರಲಿವೆ. ದೇವಾಲಯದ ಸಮೀಪವಿರುವ ಅಂಗಡಿಗಳನ್ನು ಸಹ ಮುಚ್ಚಲಾಗುವುದು. ದೇವಾಲಯ ಇರುವ ವಾರ್ಡ್ನಲ್ಲಿ ಕೊರೋನಾ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ.
ಪರಶ್ಚಿನಿ ಶ್ರೀಮುತಪ್ಪನ್ ಮದಪ್ಪುರ ಕಣ್ಣೂರಿನ ಆಂತೂರ್ ಪುರಸಭೆಯ ವಾರ್ಡ್ನಲ್ಲಿದೆ. ಪಕ್ಕದ ವಾರ್ಡ್ಗಳಲ್ಲೂ ಸೋಂಕು ವ್ಯಾಪಕಗೊಳ್ಳುತ್ತಿದೆ. ಕ್ಷೇತ್ರ ಪ್ರವೇಶ ನಿಬಂಧನೆಯು ಈ ತಿಂಗಳು 30 ರವರೆಗೆ ಇರುತ್ತದೆ.
ಕೊರೋನಾ ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿಯೂ ಭಕ್ತರಿಗೆ ಪರಶ್ವಿನಿಕಡವು ಮುತಪ್ಪನ್ ಮದಪುರ ಪ್ರವೇಶಿಸಲು ಅವಕಾಶವಿರಲಿಲ್ಲ. ಆಗ ಕ್ಷೇತ್ರ ವಿಧಿ ವಿಧಾನಗಳು ಮಾತ್ರ ನೆರವೇರುತ್ತಿದ್ದವು. ಅಂದಿನಂತೆಯೇ ಇನ್ನು ಮುಂದಿನ ಹತ್ತು ದಿನಗಳಲ್ಲೂ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಮಾತ್ರ ನಡೆಸಲು ತೀರ್ಮಾನಿಸಲಾಗಿದೆ.