ತಿರುವನಂತಪುರ: ಕೇರಳದಲ್ಲಿ ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸಜ್ಜುಗೊಳಿಸಲು ಶಿಕ್ಷಣ ಅಭಿವೃದ್ಧಿ ಕೇಂದ್ರ ಸಜ್ಜಾಗಿದೆ. ಕೊರೋನಾ ಶಿಕ್ಷಣ ಕಾರ್ಯಕ್ರಮ ಎಂಬ ಯೋಜನೆಯಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಶಿಕ್ಷಣ ಅಭಿವೃದ್ಧಿ ಕೇಂದ್ರ ಆಯೋಜಿಸಿದ್ದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬ್ರೇಕ್ ದಿ ಚೈನ್, ಕೊರೋನಾ ತಡೆಗಟ್ಟುವಿಕೆ, ಸಮುದಾಯದ ಮುಂದಿರುವ ಜಾಗೃತಿ, ಆರೋಗ್ಯ-ಆಹಾರ ಪದ್ಧತಿ ಮತ್ತು ಪ್ರಕೃತಿ ಸಂರಕ್ಷಣೆ ಕುರಿತು ಜಾಗೃತಿ-ಸ್ವಯಂಪ್ರೇರಿತ ಚಟುವಟಿಕೆಗಳಲ್ಲಿ ದೀರ್ಘಾವಧಿಯ ತಡೆಗಟ್ಟುವಿಕೆಯ ಸಂದೇಶವನ್ನು ಜಾರಿಗೆ ತರಲು ಮತ್ತು ಸಮುದಾಯದಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗುವುದು. ಕೇರಳ, ಐಎಂಎ ಮತ್ತು ರೆಡ್ಕ್ರಾಸ್ನ ಸುಮಾರು 100 ಶಿಕ್ಷಕರ ತರಬೇತಿ ಸಂಸ್ಥೆಗಳ ಸಹಯೋಗದೊಂದಿಗೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಈ ಬಗ್ಗೆ ನಡೆದ ಸಮಾವೇಶವನ್ನು ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಮೋಹನನ್ ಕುನ್ನುಮ್ಮಲ್ ಉದ್ಘಾಟಿಸಿದರು. ಕೊರೋನದ ಎರಡನೇ ಹಂತದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಕ್ಷಣಾ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಬೇಕು ಎಂದರು. ಕೊರೋನಾ ವೈರಸ್ನ ವಿಜ್ಞಾನ ಮತ್ತು ತಡೆಗಟ್ಟುವ ವಿಧಾನಗಳನ್ನು ಕೇಂದ್ರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್-ಇನ್-ಚಾರ್ಜ್ ಮತ್ತು ವೈರಾಲಜಿ ಲ್ಯಾಬ್ ಉಸ್ತುವಾರಿ ಡಾ.ರಾಜೇಂದ್ರ ಪಿಲಂಗಟ್ಟ ವಿವರಿಸಿದರು.
ಐಎಂಎ ಸಾಂಕ್ರಾಮಿಕ ನಿಯಂತ್ರಣ ಸೆಲ್ ನ ರಾಜ್ಯ ಕನ್ವೀನರ್ ಪ್ರೊ. ಪದ್ಮಕುಮಾರ್ ಅವರು ಕೊರೊನಾ ಶಿಕ್ಷಣದ ಬಗ್ಗೆ ಮಾರ್ಗನಿರ್ದೇಶನಗಳನ್ನು ನೀಡಿದರು. ಭಾಎರತೀಯ ರೆಡ್ ಕ್ರಾಸ್ ಸೊಸೈಟಿಯ ರಾಜ್ಯಾಧ್ಯಕ್ಷ ಎಂ.ಎ.ರಂಜಿತ್ ಕಾರ್ತಿಕೇಯನ್, ಕೇಂದ್ರ ವಿದ್ಯಾಭ್ಯಾಸ ಉಸ್ತುವಾರಿ ಸಮಿತಿ ಸದಸ್ಯ ಎಂ. ವಿನೋದ್, ಶಿಕ್ಷಣ ಅಭಿವೃದ್ಧಿ ಕೇಂದ್ರದ ಅಧ್ಯಕ್ಷ ಡಾ.ಎನ್.ಸಿ.ಇಂದುಚೂಡನ್, ರಾಜ್ಯ ಸಂಯೋಜಕ ಬಿ.ಕೆ.ಪ್ರೇಶ್ ಕುಮಾರ್, ಎನ್ಸಿಟಿಇ ಸದಸ್ಯ ಜಾಬಿ ಬಾಲಕೃಷ್ಣನ್, ಕಾರ್ಯಕ್ರಮ ಸಂಯೋಜಕ ಪಿ.ಪಿ.ರಾಜೇಶ್, ಡಾ. ಆಶಾ ಮತ್ತು ಡಾ.ಜಯಕುಮಾರ್ ಭಾಗವಹಿಸಿದ್ದರು.





