ತಿರುವನಂತಪುರ: ನಾಳೆಯಿಂದ ರಾಜ್ಯಾದ್ಯಂತ ಜಾರಿಯಾಗುತ್ತಿರುವ ಲಾಕ್ ಡೌನ್ ಭಾಗವಾಗಿ ಸರ್ಕಾರ ನೀಡಿರುವ ರಿಯಾಯಿತಿಗಳನ್ನು ಕಡಿಮೆ ಮಾಡುವಂತೆ ಪೋಲೀಸರು ಬೇಡಿಕೆಯಿರಿಸಿದ್ದಾರೆ. ನಿರ್ಮಾಣ ವಲಯಗಳ ಮೇಲೆ ಹೆಚ್ಚಿನ ನಿಯಂತ್ರಣ ಹೇರಲು ಪೋಲೀಸರು ಒತ್ತಾಯಿಸುತ್ತಿದ್ದಾರೆ.
ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಸಮಯವನ್ನು ಕಡಿಮೆ ಮಾಡಬೇಕು ಎಂದೂ ಅಭಿಪ್ರಾಯಪಡಲಾಗಿದೆ. ರಿಯಾಯಿತಿಗಳನ್ನು ಹೆಚ್ಚಿಸಿದರೆ, ಜನದಟ್ಟಣೆ ಹೆಚ್ಚಳಗೊಂಡು ಲಾಕ್ಡೌನ್ ಕಟ್ಟುನಿಟ್ಟಾಗಿರುವುದಿಲ್ಲ ಎಂಬ ಕಾರಣವನ್ನು ಪೋಲೀಸ್ ಇಲಾಖೆ ಸರ್ಕಾರಕ್ಕೆ ಮನದಟ್ಟು ಮಾಡಿದೆ. ಲಾಕ್ ಡೌನ್ ಆದೇಶ ಹೊರಡಿಸಿದ ನಂತರ ಸಿಎಂಗೆ ಪೋಲೀಸರ ಈ ನಿಲುವುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಲಾಕ್ ಡೌನ್ ಬಿಗಿಗೊಳಿಸುವುದಾಗಿ ಹೇಳಿದ್ದರು. ಇಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.
ಶನಿವಾರದಿಂದ 16 ರವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ. ಸಾರ್ವಜನಿಕ ಸಾರಿಗೆ ಇರುವುದಿಲ್ಲ. ಮೆಟ್ರೋ ಹೊರತುಪಡಿಸಿ ರೈಲು ಮತ್ತು ವಾಯು ಸೇವೆ ಇರುತ್ತದೆ. ದಿನಸಿ ಮತ್ತು ತರಕಾರಿ ಅಂಗಡಿಗಳು ಬೆಳಿಗ್ಗೆ 9.30 ವರೆಗಷ್ಟೇ ಕಾರ್ಯನಿರ್ವಹಿಸಬಹುದು. ಮದುವೆ ಮತ್ತು ಅಂತ್ಯಕ್ರಿಯೆಯಂತಹ ಸಮಾರಂಭಗಳಿಗೆ ಕೇವಲ 20 ಜನರಿಗೆ ಮಾತ್ರ ಅವಕಾಶವಿದೆ. ಲಾಕ್ಡೌನ್ನಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಲಾಕ್ಡೌನ್ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.