ಕಾಸರಗೋಡು: ಆನ್ ಲೈನ್ ವ್ಯಾಪಾರ ವಹಿವಾಟುಗಳನ್ನು ನಿಯಂತ್ರಿಸಬೇಕು, ಕೋವಿಡ್ ಮಾನದಂಡಗಳನ್ನು ಪಾಲಿಸಿ ವ್ಯಾಪಾರ ಕೇಂದ್ರಗಳಿಗೆ ಮತ್ತೆ ತೆರೆದು ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು, ವ್ಯಾಪಾರ ವಲಯಕ್ಕೆ ಉತ್ತೇಜನ ಪ್ಯಾಕೇಜ್ ಘೋಷಿಸಬೇಕು, ಬಾಡಿಗೆಯಲ್ಲಿ ವಿನಾಯ್ತಿ ಘೋಷಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ವ್ಯಾಪಾರಿ ಸಮಿತಿ ಕಾಸರಗೋಡಿನ ಕಾರ್ಯದರ್ಶಿ ಮೋಹನ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಎಂ.ಉಮೇಶ್ ಸಾಲ್ಯಾನ್ ಉದ್ಘಾಟಿಸಿದರು. ಪ್ರಮುಖರಾದ ಉಲ್ಲಾಸ್ ಪಿ, ರಮೇಶ್, ಮೊಯ್ದೀನ್ ಚೋಯಿಸ್, ಹಮೀದ್ ಮಲಬಾರ್, ಶಶಿಧರನ್, ಮುಸ್ತಫ ಮಲಬಾರ್, ಕಲೀಲ್, ಚರಣ್ ರಾಜ್ ಮೊದಲಾದವರು ನೇತೃತ್ವ ವಹಿಸಿದ್ದರು.



